ಗ್ರಾಮ ಪಂಚಾಯ್ತಿ ಸಿಬ್ಬಂದಿ ಇದ್ದರೂ, ಶೇಖಪ್ಪ ಅವರು ಪ್ರತಿ ದಿನ ಬೆಳಿಗ್ಗೆ ಬೈಕ್ ಏರಿ ಗ್ರಾಮದ ಎಲ್ಲ ಓಣಿಗಳಿಗೆ ಭೇಟಿ ನೀಡಿ, ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸುತ್ತಾರೆ. ಬೀದಿ ದೀಪಗಳ ನಿರ್ವಹಣೆ ಮಾಡಿಸುತ್ತಿದ್ದಾರೆ. ಪೌರಕಾರ್ಮಿರ ಜತೆಗೆ ತಾವೂ ಗಟಾರಗಳನ್ನು ಸ್ವಚ್ಚಗೊಳಿಸುತ್ತಾರೆ. ಗುತ್ತಿಗೆದಾರರು ಸಿಮೆಂಟ್ ರಸ್ತೆಗಳಿಗೆ ನೀರು ಹಾಕದಿದ್ದರೆ, ತಾವೇ ಸ್ವತಃ ಕೊಡ ಹಿಡಿದು ನೀರು ಹಾಕುತ್ತಾರೆ. ಮನೆ ಮನೆಗಳಿಗೆ ತೆರಳಿ, ನೀರಿನ ಅಪವ್ಯಯ ತಡೆಯುವಂತೆ ಜಾಗೃತಿ ಮೂಡಿಸುತ್ತಾರೆ.