ಗುಗ್ಗಳದ ಮೆರವಣಿಗೆಯುದ್ದಕ್ಕೂ ಹರ ಹರ ಮಹಾದೇವ, ವೀರಭದ್ರೇಶ್ವರ ಮಹಾರಾಜ ಕೀ ಜೈ, ಎಂಬ ಘೋಷಣೆಗಳು ಮೊಳಗಿದವು. ಇದರೊಂದಿಗೆ ಯುವಕರ ನಂದಿಕೋಲ ಕುಣಿತ ಜನ ಮನ ಸೆಳೆಯಿತು. ಮಹಿಳೆಯರು, ಮಕ್ಕಳು, ಯುವಕರು ತಮ್ಮ ಕೆನ್ನೆಗೆ ಶಸ್ತ್ರವನ್ನು ಹಾಕಿಸಿಕೊಂಡು ಭಕ್ತಿಯ ಸಂಕಲ್ಪವನ್ನು ಅರ್ಪಿಸಿದರು. 20 ಜನ ಯುವಕರು 108 ಗಂಟುಗಳ್ಳುಳ್ಳ ದಾರವನ್ನು ಏಕ ಕಾಲಕ್ಕೆ ತಮ್ಮ ಕೆನ್ನೆಗೆ ಹಾಕಿಸಿಕೊಂಡು ಭಕ್ತಿಯನ್ನು ಸಮರ್ಪಿಸಿದರು.