ಲಕ್ಷ್ಮೇಶ್ವರ: ಬರಗಾಲದ ಪರಿಣಾಮವಾಗಿ ಕೆರೆ, ಹಳ್ಳ, ಕೊಳ್ಳಗಳು, ಚೆಕ್ ಡ್ಯಾಂಗಳು ನೀರಿಲ್ಲದೇ ಒಣಗಿವೆ. ಇದರಿಂದಾಗಿ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನು ಅರಿತ ರೈತರೊಬ್ಬರು ತಮ್ಮ ಸ್ವಂತ ಕೊಳವೆ ಬಾವಿಯ ನೀರನ್ನು ಒಂದು ದೊಡ್ಡ ಗುಂಡಿಯಲ್ಲಿ ಸಂಗ್ರಹಿಸಿ ದನಕರುಗಳಿಗೆ ಕುಡಿಯಲು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.