ಇಲ್ಲಿಯ ಯೋಗಿರಾಜ ಭಕ್ತ ಮಂಡಳಿ ಹಮ್ಮಿಕೊಂಡಿರುವ ಯೋಗಿರಾಜ ಮಹಾರಾಜರ ಶತಮಾನ ಆರಾಧನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘ಈ ಜಗತ್ತಿಗೆ ಪ್ರಪ್ರಥಮವಾಗಿ ಯೋಗವನ್ನು ಪರಿಚಯಿಸಿದವರು ಯಾಜ್ಞವಲ್ಕ್ಯರು. ನಂತರ ಪತಂಜಲಿ ಮಹರ್ಷಿ, ಸ್ವಾತರಾಮ ಹಾಗೂ ಶ್ರೀಕೃಷ್ಣರು. ಇವರ ತತ್ವ, ಸಿದ್ಧಾಂತಗಳಿಂದ ಹಲವಾರು ಜನ ಸಾಧನೆ ಮಾಡಿ ಯೋಗಿಗಳಾಗಿದ್ದಾರೆ. ಈ ದಿಸೆಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಯೋಗ ಸಂಪ್ರದಾಯವನ್ನು ಯೋಗಿರಾಜರು ಅನುಸರಿಸಿ ಯೋಗದಲ್ಲಿ ಸಾಧಕರಾದರು. ಯೋಗ ಅಂತಿಮವಾಗಿ ಸಮಾಧಿ ಸ್ಥಿತಿಯಾಗಿದ್ದು, ಇದು ಬ್ರಹ್ಮಚರ್ಯದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.