<p>ರೋಣ: ‘ದೇಶವನ್ನು ಹೊಡೆದು ಆಳಲಿಚ್ಛಿಸುವ ರಾಜಕಾರಣಿಗಳಿಗೆ ಹಿಂದೂಗಳು ತಕ್ಕ ಪಾಠ ಕಲಿಸಬೇಕು. ಅಖಂಡ ಭಾರತದ ಕಲ್ಪನೆ, ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮ ಹಿಂದೂಗಳಲ್ಲಿ ಪ್ರಜ್ವಲಿಸುವಂತಾಗಲಿ’ ಎಂದು ಹಿಂದೂ ಪರ ಹಿರಿಯ ಮುಖಂಡ ಅಶೋಕ ನವಲಗುಂದ ಹೇಳಿದರು.</p>.<p>ಪಟ್ಟಣದ ಕೇಸರಿ ನಂದನ ಯುವಕರು ಸೋಮವಾರ ಹಮ್ಮಿಕೊಂಡಿದ್ದ ಅಖಂಡ ಭಾರತದ ಸಂಕಲ್ಪ ಯಾತ್ರೆಯ ಬೃಹತ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.</p>.<p>ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಶಾಂತಿಧೂತರಿಂದಷ್ಟೇ ಅಲ್ಲ. ಅದಕ್ಕೂ ಮೊದಲೇ ಕ್ರಾಂತಿಕಾರಿಗಳ ಹೋರಾಟಕ್ಕೆ ಬ್ರಿಟಿಷರು ಮಣಿದಿದ್ದರು. ಎಲ್ಲ ಹೋರಾಟಗಾರ ಫಲವೇ 1947 ರ ಸ್ವಾತಂತ್ರ್ಯ. ಆದರೆ ಬಹುಜನರ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳದೆ ನಿರಾಶೆ ತಂದಿದ್ದು ಮಾತ್ರ ಇಂದಿಗೂ ನೋವಿನ ಸಂಗತಿ’ ಎಂದರು.</p>.<p>ಸಂಘದ ಪ್ರದಾನ ಕಾರ್ಯದರ್ಶಿ ರವಿ ಕೊಪ್ಪದ, ಸಂಜು ಉಳ್ಳಾಗಡ್ಡಿ, ಲೋಹಿತ್ ಕುಂಬಾರ, ಸಂತೋಷ ಪಲ್ಲೇದ, ಮಲ್ಲು ಸಂತೋಜಿ, ಶ್ರೀನಿವಾಸ್ ಮ್ಯಾಗೇರಿ ಸುನೀಲ ರಂಗರೇಜಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೋಣ: ‘ದೇಶವನ್ನು ಹೊಡೆದು ಆಳಲಿಚ್ಛಿಸುವ ರಾಜಕಾರಣಿಗಳಿಗೆ ಹಿಂದೂಗಳು ತಕ್ಕ ಪಾಠ ಕಲಿಸಬೇಕು. ಅಖಂಡ ಭಾರತದ ಕಲ್ಪನೆ, ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮ ಹಿಂದೂಗಳಲ್ಲಿ ಪ್ರಜ್ವಲಿಸುವಂತಾಗಲಿ’ ಎಂದು ಹಿಂದೂ ಪರ ಹಿರಿಯ ಮುಖಂಡ ಅಶೋಕ ನವಲಗುಂದ ಹೇಳಿದರು.</p>.<p>ಪಟ್ಟಣದ ಕೇಸರಿ ನಂದನ ಯುವಕರು ಸೋಮವಾರ ಹಮ್ಮಿಕೊಂಡಿದ್ದ ಅಖಂಡ ಭಾರತದ ಸಂಕಲ್ಪ ಯಾತ್ರೆಯ ಬೃಹತ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.</p>.<p>ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಶಾಂತಿಧೂತರಿಂದಷ್ಟೇ ಅಲ್ಲ. ಅದಕ್ಕೂ ಮೊದಲೇ ಕ್ರಾಂತಿಕಾರಿಗಳ ಹೋರಾಟಕ್ಕೆ ಬ್ರಿಟಿಷರು ಮಣಿದಿದ್ದರು. ಎಲ್ಲ ಹೋರಾಟಗಾರ ಫಲವೇ 1947 ರ ಸ್ವಾತಂತ್ರ್ಯ. ಆದರೆ ಬಹುಜನರ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳದೆ ನಿರಾಶೆ ತಂದಿದ್ದು ಮಾತ್ರ ಇಂದಿಗೂ ನೋವಿನ ಸಂಗತಿ’ ಎಂದರು.</p>.<p>ಸಂಘದ ಪ್ರದಾನ ಕಾರ್ಯದರ್ಶಿ ರವಿ ಕೊಪ್ಪದ, ಸಂಜು ಉಳ್ಳಾಗಡ್ಡಿ, ಲೋಹಿತ್ ಕುಂಬಾರ, ಸಂತೋಷ ಪಲ್ಲೇದ, ಮಲ್ಲು ಸಂತೋಜಿ, ಶ್ರೀನಿವಾಸ್ ಮ್ಯಾಗೇರಿ ಸುನೀಲ ರಂಗರೇಜಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>