<h4>ಮುಳಗುಂದ: ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಗಳ 167ನೇಯ ಸ್ಮರಣೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ.</h4><p>ಬಾಲಲೀಲಾ ಮಹಾಂತ ಶಿವಯೋಗಿಗಳು ರಾಜ ಮಹಾರಾಜರ ಸನ್ಮಾನಗಳಿಗೆ ಅಂಟಿಕೊಳ್ಳದೇ ಹಂಗಿಗೆ ಒಳಗಾಗದ ನಿರ್ಭಿಡೆಯ ಯೋಗಿ ಎಂದು ಜನಪ್ರಿಯತೆ ಗಳಿಸಿದವರು. ಇವರು ನಡೆದದ್ದೇ ದಾರಿ, ನುಡಿದದ್ದೇ ಹಾಡು, ಸಾಮಾನ್ಯ ಜನರ ಸಂಕಷ್ಟಗಳನ್ನು ದೂರ<br>ಗೊಳಿಸಿ, ಸರಳತೆ ಸಹಜ ಭಕ್ತಿಯೇ ಶಿವ<br>ನೊಲುಮೆಗೆ ಸಾಧನ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು.</p><p>ಶಿವಯೋಗಿಗಳು ಅಂತಃಸ್ಪೂರ್ತಿ ಬಂದಾಗ ಮಠದ ತೊಲೆ, ಬೋಧಿಗೆಯ ಮೇಲೆ ಬರೆದ ಅಂದಿನ ಹಾಡುಗಳನ್ನು ಸಂಗ್ರಹಿಸಿ, ಸಂರಕ್ಷಿಸಿರುವ ಅವರ ನೆಚ್ಚಿನ ಶಿಷ್ಯ ಮರಿದೇವರನ್ನು ಸ್ಮರಿಸಲೇಬೇಕು. ಆ ಹಾಡುಗಳ ಸಂಗ್ರಹವೇ ‘ಕೈವಲ್ಯ ದರ್ಪಣ’ ಎಂದು ಪ್ರಸಿದ್ಧಿಯಾಗಿದೆ.</p><p>ಜಗದ್ಗುರು ಎಂದಾಗುವವರು ಮೊದಲು ಜಗತ್ ಪುತ್ರರಾಗಬೇಕೆಂಬ ಸೂಚನೆ ಸ್ವಾಮಿಗಳಿಗೆ ಕೊಟ್ಟಿರುವುದು ಅತ್ಯಂತ ಮಾರ್ಮಿಕವಾಗಿದೆ. ಒಟ್ಟಾರೆ ಮಹಾಂತ ಶಿವಯೋಗಿಗಳವರ ಜೀವನ ಅಮೃತಮಯ, ತೇಜೋಪೂರ್ಣ.</p><p>ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಭಕ್ತಿಪೂರ್ವಕವಾಗಿ ಬಾಲಲೀಲ ಮಹಾಂತ ಶಿವಯೋಗಿಗಳಿಗೆ ಕನಕಾಭಿಷೇಕವನ್ನು ಮಾಡಿದರು. ಕನಕಾಭಿಷೇಕ ಪ್ರಸಂಗದಲ್ಲಿ ಶಿವಯೋಗಿಗಳು ಆತ್ಮಲಿಂಗ ನಿರೀಕ್ಷೆಯಲ್ಲಿದ್ದರೆಂಬ ಸಂಗತಿ ಅಪೂರ್ವವಾದುದು. ಅರಸರು ಅರ್ಪಿಸಿದ ಮುತ್ತುರತ್ನಗಳನ್ನು ಬಯಸದೇ, ಮಹಾಂತ ಶಿವಯೋಗಿಗಳು ಕಲಾತ್ಮಕವಾದ ಒಂದು ಕುಂಬಳಕಾಯಿ ಬುರುಡೆಯನ್ನು ಮಾತ್ರ ಸ್ವೀಕರಿಸಿದರೆಂಬುದು ಈ ಮಹಿಮರ ಪರಿಪೂರ್ಣ ವೈರಾಗ್ಯ ನಿಷ್ಠೆಯನ್ನು, ನಿಜತತ್ವದ ನಿಲುವನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂದು ಪಡೆದ ಆ ಕುಂಬಳಕಾಯಿಯ ಬುರುಡೆ ಶ್ರೀಗಳ ಮಠದಲ್ಲಿ ಇಂದಿಗೂ ನೋಡಲು ಸಿಗುತ್ತದೆ.</p><p>1973ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಸ್ವಾಮೀಜಿ ಮಠದ ಜೀರ್ಣೋದ್ಧಾರ, ಸಾಮಾಜಿಕ ಸುಧಾರಣೆ, ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು, ಪಶುಪತಿಹಾಳ, ಕೆರೂರ, ಧಾರವಾಡ ಮುರುಘಾಮಠದ ಮಠಾಧ್ಯಕ್ಷರಾಗಿ ನೂರಾರು ಗ್ರಂಥ ಪುಸ್ತಕಗಳನ್ನು ಪ್ರಕಾಶಪಡಿಸಿದ ಸಾಹಿತ್ಯಾರಾಧಕರು. ಮುಳಗುಂದ ಗವಿಮಠವನ್ನು ಭಕ್ತಾದಿಗಳ ಸಹಾಯದಿಂದ ಸಮಗ್ರವಾಗಿ ಜಿರ್ಣೋದ್ಧಾರ ಮಾಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h4>ಮುಳಗುಂದ: ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಗಳ 167ನೇಯ ಸ್ಮರಣೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ.</h4><p>ಬಾಲಲೀಲಾ ಮಹಾಂತ ಶಿವಯೋಗಿಗಳು ರಾಜ ಮಹಾರಾಜರ ಸನ್ಮಾನಗಳಿಗೆ ಅಂಟಿಕೊಳ್ಳದೇ ಹಂಗಿಗೆ ಒಳಗಾಗದ ನಿರ್ಭಿಡೆಯ ಯೋಗಿ ಎಂದು ಜನಪ್ರಿಯತೆ ಗಳಿಸಿದವರು. ಇವರು ನಡೆದದ್ದೇ ದಾರಿ, ನುಡಿದದ್ದೇ ಹಾಡು, ಸಾಮಾನ್ಯ ಜನರ ಸಂಕಷ್ಟಗಳನ್ನು ದೂರ<br>ಗೊಳಿಸಿ, ಸರಳತೆ ಸಹಜ ಭಕ್ತಿಯೇ ಶಿವ<br>ನೊಲುಮೆಗೆ ಸಾಧನ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು.</p><p>ಶಿವಯೋಗಿಗಳು ಅಂತಃಸ್ಪೂರ್ತಿ ಬಂದಾಗ ಮಠದ ತೊಲೆ, ಬೋಧಿಗೆಯ ಮೇಲೆ ಬರೆದ ಅಂದಿನ ಹಾಡುಗಳನ್ನು ಸಂಗ್ರಹಿಸಿ, ಸಂರಕ್ಷಿಸಿರುವ ಅವರ ನೆಚ್ಚಿನ ಶಿಷ್ಯ ಮರಿದೇವರನ್ನು ಸ್ಮರಿಸಲೇಬೇಕು. ಆ ಹಾಡುಗಳ ಸಂಗ್ರಹವೇ ‘ಕೈವಲ್ಯ ದರ್ಪಣ’ ಎಂದು ಪ್ರಸಿದ್ಧಿಯಾಗಿದೆ.</p><p>ಜಗದ್ಗುರು ಎಂದಾಗುವವರು ಮೊದಲು ಜಗತ್ ಪುತ್ರರಾಗಬೇಕೆಂಬ ಸೂಚನೆ ಸ್ವಾಮಿಗಳಿಗೆ ಕೊಟ್ಟಿರುವುದು ಅತ್ಯಂತ ಮಾರ್ಮಿಕವಾಗಿದೆ. ಒಟ್ಟಾರೆ ಮಹಾಂತ ಶಿವಯೋಗಿಗಳವರ ಜೀವನ ಅಮೃತಮಯ, ತೇಜೋಪೂರ್ಣ.</p><p>ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಭಕ್ತಿಪೂರ್ವಕವಾಗಿ ಬಾಲಲೀಲ ಮಹಾಂತ ಶಿವಯೋಗಿಗಳಿಗೆ ಕನಕಾಭಿಷೇಕವನ್ನು ಮಾಡಿದರು. ಕನಕಾಭಿಷೇಕ ಪ್ರಸಂಗದಲ್ಲಿ ಶಿವಯೋಗಿಗಳು ಆತ್ಮಲಿಂಗ ನಿರೀಕ್ಷೆಯಲ್ಲಿದ್ದರೆಂಬ ಸಂಗತಿ ಅಪೂರ್ವವಾದುದು. ಅರಸರು ಅರ್ಪಿಸಿದ ಮುತ್ತುರತ್ನಗಳನ್ನು ಬಯಸದೇ, ಮಹಾಂತ ಶಿವಯೋಗಿಗಳು ಕಲಾತ್ಮಕವಾದ ಒಂದು ಕುಂಬಳಕಾಯಿ ಬುರುಡೆಯನ್ನು ಮಾತ್ರ ಸ್ವೀಕರಿಸಿದರೆಂಬುದು ಈ ಮಹಿಮರ ಪರಿಪೂರ್ಣ ವೈರಾಗ್ಯ ನಿಷ್ಠೆಯನ್ನು, ನಿಜತತ್ವದ ನಿಲುವನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂದು ಪಡೆದ ಆ ಕುಂಬಳಕಾಯಿಯ ಬುರುಡೆ ಶ್ರೀಗಳ ಮಠದಲ್ಲಿ ಇಂದಿಗೂ ನೋಡಲು ಸಿಗುತ್ತದೆ.</p><p>1973ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಸ್ವಾಮೀಜಿ ಮಠದ ಜೀರ್ಣೋದ್ಧಾರ, ಸಾಮಾಜಿಕ ಸುಧಾರಣೆ, ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು, ಪಶುಪತಿಹಾಳ, ಕೆರೂರ, ಧಾರವಾಡ ಮುರುಘಾಮಠದ ಮಠಾಧ್ಯಕ್ಷರಾಗಿ ನೂರಾರು ಗ್ರಂಥ ಪುಸ್ತಕಗಳನ್ನು ಪ್ರಕಾಶಪಡಿಸಿದ ಸಾಹಿತ್ಯಾರಾಧಕರು. ಮುಳಗುಂದ ಗವಿಮಠವನ್ನು ಭಕ್ತಾದಿಗಳ ಸಹಾಯದಿಂದ ಸಮಗ್ರವಾಗಿ ಜಿರ್ಣೋದ್ಧಾರ ಮಾಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>