ಯಶ್ ಕಾರು ಚೇಸ್ ಮಾಡಿಕೊಂಡು ಬಂದಿಲ್ಲ: ಎಸ್ಪಿ
‘ಸೂರಣಗಿಯಲ್ಲಿ ನಡೆದ ವಿದ್ಯುತ್ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮೂವರು ಯುವಕರ ಆರೋಗ್ಯ ವಿಚಾರಿಸಲು ನಟ ಯಶ್ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬಂದಿದ್ದರು. ಅವರು ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಹುಬ್ಬಳ್ಳಿ ಕಡೆಗೆ ತೆರಳಿದರು. ಅಲ್ಲಿಯವರೆಗೂ ನಾನು ಜತೆಯಲ್ಲಿದ್ದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.
‘ನಟ ಯಶ್ ಬೆಂಗಾವಲಿಗಿದ್ದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ ಆಗಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಯಶ್ ಅವರಿದ್ದ ಕಾರನ್ನು ಯಾವುದೇ ಬೈಕ್ ಸವಾರ ಚೇಸ್ ಮಾಡಿಕೊಂಡು ಬಂದಿಲ್ಲ. ಕಾರನ್ನು ಚೇಸ್ ಮಾಡಿಕೊಂಡು ಬರಲು ಅವಕಾಶ ಇಲ್ಲದಂತೆ ಎಚ್ಚರಿಕೆ ವಹಿಸಿದ್ದೆವು’ ಎಂದು ತಿಳಿಸಿದ್ದಾರೆ.
‘ಬೇರೊಂದು ಕಡೆ ಕರ್ತವ್ಯ ಮುಗಿಸಿ, ಪೊಲೀಸ್ ವಾಹನ ಹೆಡ್ಕ್ವಾರ್ಟರ್ಗೆ ತೆರಳುವಾಗ, ಮಲ್ಲಸಮುದ್ರ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.