<p><strong>ಗದಗ: </strong>ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಪ್ರತಿ ಕ್ವಿಂಟಲ್ಗೆ ₹2,200ರಷ್ಟು ಕುಸಿದಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ಬರುವಂತ ಸ್ಥಿತಿ ನಿರ್ಮಾಣವಾಗಿದೆ.</p>.<p>ಸದ್ಯ ರಫ್ತು ಗುಣಮಟ್ಟದ ಈರುಳ್ಳಿಗೆ ಮಾತ್ರ ಕ್ವಿಂಟಲ್ಗೆ ಗರಿಷ್ಠ ₹800 ಧಾರಣೆ ಇದೆ.ಸಾಮಾನ್ಯ ದರ್ಜೆಯ ಈರುಳ್ಳಿಯನ್ನು ಎಪಿಎಂಸಿ ವರ್ತಕರು ₹200ರಿಂದ ₹500ಕ್ಕೆ ಖರೀದಿಸುತ್ತಿದ್ದು, ರೈತರ ಕೈಗೆ ಬೆಳೆಗೆ ಖರ್ಚು ಮಾಡಿದ ಹಣವೂ ಬಾರದಂತಾಗಿದೆ.</p>.<p>ಕಳೆದ ಮೂರು ವಾರಗಳಲ್ಲಿ ಗದಗ ಎಪಿಎಂಸಿಗೆ ಒಟ್ಟು 13,220 ಕ್ವಿಂಟಲ್ನಷ್ಟು ಈರುಳ್ಳಿ ಆವಕವಾಗಿದೆ. ಅ.24ರಂದು ಮಾತ್ರ ಒಂದು ದಿನ ಗರಿಷ್ಠ ಧಾರಣೆ ₹1,200 ದಾಟಿದೆ.</p>.<p>ಕಳೆದ ಬಾರಿ ಮುಂಗಾರಿನಲ್ಲಿ ಈರುಳ್ಳಿ ಬೆಳೆದ ಜಿಲ್ಲೆಯ ರೈತರಿಗೆ ಬಂಪರ್ ಬೆಲೆ ಲಭಿಸಿತ್ತು. ಗದಗ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ಸರಾಸರಿ ₹2,800ರಿಂದ ₹3,000ಕ್ಕೆ ಮಾರಾಟವಾಗಿತ್ತು. ಉತ್ತಮ ಧಾರಣೆ ಲಭಿಸಿದ ಹಿನ್ನೆಲೆಯಲ್ಲಿ ಈ ಬಾರಿಯೂ ಹೆಚ್ಚಿನ ರೈತರು ಮುಂಗಾರಿನಲ್ಲಿ ಈರುಳ್ಳಿ ಬಿತ್ತನೆಗೆ ಮುಂದಾಗಿದ್ದರು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿ ಗಣನೀಯವಾಗಿ ತಗ್ಗಿದೆ. ಈರುಳ್ಳಿ ಗುಣಮಟ್ಟವೂ (ಗಡ್ಡೆಗಳ ಗಾತ್ರ) ಕುಸಿದಿರುವುದರಿಂದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>‘ಮುಂಗಾರಿನಲ್ಲಿ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ಜಮೀನಿನಲ್ಲಿ ಬೆಳೆಯಲಾದ ಈರುಳ್ಳಿ ಈಗ ಮಾರುಕಟ್ಟೆಗೆ ಬರುತ್ತಿದೆ.ಈ ಬಾರಿ ಗುಣಮಟ್ಟದ ಗಡ್ಡೆಗಳು ಬರುತ್ತಿಲ್ಲ.ಕ್ವಿಂಟಲ್ಗೆ ಸರಾಸರಿ ₹500ರಿಂದ ₹600ಕ್ಕೆ ಖರೀದಿಸುತ್ತಿದ್ದೇವೆ’ ಎಂದು ಎಪಿಎಂಸಿ ವರ್ತಕ ಎಂ.ಎಂ ಕನವಳ್ಳಿ ಹೇಳಿದರು.</p>.<p>‘ಒಂದು ಎಕರೆಗೆ 12 ಚೀಲ ಈರುಳ್ಳಿ ಬಂದಿದೆ. ಬೀಜ, ಗೊಬ್ಬರ, ಆಳಿನ ಕೂಲಿ, ಬಾಡಿಗೆ ಸೇರಿ ₹20 ಸಾವಿರ ಖರ್ಚಾಗಿದೆ. ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಗೆ ಬರುತ್ತಿಲ್ಲ’ ಗದಗ ಎಪಿಎಂಸಿಗೆ ಈರುಳ್ಳಿ ಮಾರಾಟ ಮಾಡಲು ಬಂದಿದ್ದ, ತಾಲ್ಲೂಕಿನ ಹೊಂಬಳ ಗ್ರಾಮದ ರೈತ ಸಿದ್ದಪ್ಪ ಮಾಳಗಿಮನಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಪ್ರತಿ ಕ್ವಿಂಟಲ್ಗೆ ₹2,200ರಷ್ಟು ಕುಸಿದಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ಬರುವಂತ ಸ್ಥಿತಿ ನಿರ್ಮಾಣವಾಗಿದೆ.</p>.<p>ಸದ್ಯ ರಫ್ತು ಗುಣಮಟ್ಟದ ಈರುಳ್ಳಿಗೆ ಮಾತ್ರ ಕ್ವಿಂಟಲ್ಗೆ ಗರಿಷ್ಠ ₹800 ಧಾರಣೆ ಇದೆ.ಸಾಮಾನ್ಯ ದರ್ಜೆಯ ಈರುಳ್ಳಿಯನ್ನು ಎಪಿಎಂಸಿ ವರ್ತಕರು ₹200ರಿಂದ ₹500ಕ್ಕೆ ಖರೀದಿಸುತ್ತಿದ್ದು, ರೈತರ ಕೈಗೆ ಬೆಳೆಗೆ ಖರ್ಚು ಮಾಡಿದ ಹಣವೂ ಬಾರದಂತಾಗಿದೆ.</p>.<p>ಕಳೆದ ಮೂರು ವಾರಗಳಲ್ಲಿ ಗದಗ ಎಪಿಎಂಸಿಗೆ ಒಟ್ಟು 13,220 ಕ್ವಿಂಟಲ್ನಷ್ಟು ಈರುಳ್ಳಿ ಆವಕವಾಗಿದೆ. ಅ.24ರಂದು ಮಾತ್ರ ಒಂದು ದಿನ ಗರಿಷ್ಠ ಧಾರಣೆ ₹1,200 ದಾಟಿದೆ.</p>.<p>ಕಳೆದ ಬಾರಿ ಮುಂಗಾರಿನಲ್ಲಿ ಈರುಳ್ಳಿ ಬೆಳೆದ ಜಿಲ್ಲೆಯ ರೈತರಿಗೆ ಬಂಪರ್ ಬೆಲೆ ಲಭಿಸಿತ್ತು. ಗದಗ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ಸರಾಸರಿ ₹2,800ರಿಂದ ₹3,000ಕ್ಕೆ ಮಾರಾಟವಾಗಿತ್ತು. ಉತ್ತಮ ಧಾರಣೆ ಲಭಿಸಿದ ಹಿನ್ನೆಲೆಯಲ್ಲಿ ಈ ಬಾರಿಯೂ ಹೆಚ್ಚಿನ ರೈತರು ಮುಂಗಾರಿನಲ್ಲಿ ಈರುಳ್ಳಿ ಬಿತ್ತನೆಗೆ ಮುಂದಾಗಿದ್ದರು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿ ಗಣನೀಯವಾಗಿ ತಗ್ಗಿದೆ. ಈರುಳ್ಳಿ ಗುಣಮಟ್ಟವೂ (ಗಡ್ಡೆಗಳ ಗಾತ್ರ) ಕುಸಿದಿರುವುದರಿಂದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>‘ಮುಂಗಾರಿನಲ್ಲಿ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ಜಮೀನಿನಲ್ಲಿ ಬೆಳೆಯಲಾದ ಈರುಳ್ಳಿ ಈಗ ಮಾರುಕಟ್ಟೆಗೆ ಬರುತ್ತಿದೆ.ಈ ಬಾರಿ ಗುಣಮಟ್ಟದ ಗಡ್ಡೆಗಳು ಬರುತ್ತಿಲ್ಲ.ಕ್ವಿಂಟಲ್ಗೆ ಸರಾಸರಿ ₹500ರಿಂದ ₹600ಕ್ಕೆ ಖರೀದಿಸುತ್ತಿದ್ದೇವೆ’ ಎಂದು ಎಪಿಎಂಸಿ ವರ್ತಕ ಎಂ.ಎಂ ಕನವಳ್ಳಿ ಹೇಳಿದರು.</p>.<p>‘ಒಂದು ಎಕರೆಗೆ 12 ಚೀಲ ಈರುಳ್ಳಿ ಬಂದಿದೆ. ಬೀಜ, ಗೊಬ್ಬರ, ಆಳಿನ ಕೂಲಿ, ಬಾಡಿಗೆ ಸೇರಿ ₹20 ಸಾವಿರ ಖರ್ಚಾಗಿದೆ. ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಗೆ ಬರುತ್ತಿಲ್ಲ’ ಗದಗ ಎಪಿಎಂಸಿಗೆ ಈರುಳ್ಳಿ ಮಾರಾಟ ಮಾಡಲು ಬಂದಿದ್ದ, ತಾಲ್ಲೂಕಿನ ಹೊಂಬಳ ಗ್ರಾಮದ ರೈತ ಸಿದ್ದಪ್ಪ ಮಾಳಗಿಮನಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>