<p><strong>ನರಗುಂದ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಶನಿವಾರ ಅರ್ಧತಾಸಿಗೂ ಹೆಚ್ಚಿನ ಮಳೆ ಸುರಿಯಿತು ಜೋರಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.</p>.<p>ಕಳೆದ ಒಂದು ವಾರದಿಂದ ರೈತರು ಮಳೆಗಾಗಿ ಕಾಯುತ್ತಿದ್ದರು. ರೈತರ ಪ್ರಾರ್ಥನೆಗೆ ಕೃಪೆ ತೋರಿದ ವರುಣದೇವ ಧಾರಾಕಾರವಾಗಿ ಸುರಿದು ರೈತರ ಸಂತಸ ಇಮ್ಮಡಿಗೊಳಿಸಿತು. ಹೆಸರು ಬೆಳೆಯುವ ಹಂತದಲ್ಲಿ ಇದ್ದು, ಈ ಮಳೆಯಿಂದ ಹೆಚ್ಚಿನ ಅನುಕೂಲವಾದಂತಾಗಿದೆ. ರಭಸದ ಮಳೆಯಿಂದ ಕೆಲವೆಡೆ ಬದುಗಳು ಕೊಚ್ಚಿಕೊಂಡು ಹೋಗಿವೆ.</p>.<p>ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಜಮೀನು ಜಲಾವೃತವಾದವು.</p>.<p>ಪರದಾಟ: ಪಟ್ಟಣದಲ್ಲಿ ಸಂಜೆ 4 ಗಂಟೆ ಹೊತ್ತಿಗೆ ರಭಸದಿಂದ ಮಳೆ ಆರಂಭವಾಗಿದ್ದರಿಂದ ಚರಂಡಿ ತುಂಬಿ ಹರಿದವು. ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಶನಿವಾರವಾದರೂ ಕೆಲವು ಶಾಲೆಗಳು ಪೂರ್ಣ ದಿನ ನಡೆದ ಪರಿಣಾಮ ವಿದ್ಯಾರ್ಥಿಗಳು ಮನೆಗೆ ತೆರಳಲು ತೀವ್ರ ಪರದಾಡಿದರು.</p>.<p>ಕೆಲವು ರೈತರ ಆತಂಕ: ಮೊದಲು ಹೆಸರು ಬಿತ್ತನೆ ಮಾಡಿದ ರೈತರು ಈ ರಭಸದ ಮಳೆಯಿಂದ ಆತಂಕಗೊಳ್ಳುವಂತಾಗಿದೆ. ಅತಿ ತೇವಾಂಶ. ಹೆಚ್ಚಾಗಿ ಹಳದಿ ರೋಗಕ್ಕೆ ಹೆಸರು ಬೆಳೆ ತುತ್ತಾಗುವ ಲಕ್ಷಣಗಳು ಕಂಡು ಬರಬಹುದು ಎಂದು ರೈತರು. ಆತಂಕ ವ್ಯಕ್ತಪಡಿಸಿದರು.</p>.<p>ಆದರೆ ಹತ್ತಿ, ಮೆಕ್ಕೆಜೋಳ ಸೇರಿದಂತೆ ಕೆಲವು ಬೆಳೆಗಳಿಗೆ ಈ ಮಳೆ ವರದಾನವಾಗಿದೆ.</p>.<p><strong>ನರೇಗಲ್: ಉತ್ತಮ ಮಳೆ</strong></p>.<p>ನರೇಗಲ್: ಪಟ್ಟಣದ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಒಂದು ಉತ್ತಮವಾದ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.</p>.<p>ಮಧ್ಯಾಹ್ನ 1 ಗಂಟೆಗೆ ಜಿಟಿಜಿಟಿಯಾಗಿ ಆರಂಭವಾದ ಮಳೆ ನಂತರ ಜೋರಾಗಿ ಸುರಿದಿದೆ. ನಂತರ ಸಂಜೆ ವರೆಗೆ ಜಿಟಿಜಿಟಿಯಾಗಿ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಶನಿವಾರ ಅರ್ಧತಾಸಿಗೂ ಹೆಚ್ಚಿನ ಮಳೆ ಸುರಿಯಿತು ಜೋರಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.</p>.<p>ಕಳೆದ ಒಂದು ವಾರದಿಂದ ರೈತರು ಮಳೆಗಾಗಿ ಕಾಯುತ್ತಿದ್ದರು. ರೈತರ ಪ್ರಾರ್ಥನೆಗೆ ಕೃಪೆ ತೋರಿದ ವರುಣದೇವ ಧಾರಾಕಾರವಾಗಿ ಸುರಿದು ರೈತರ ಸಂತಸ ಇಮ್ಮಡಿಗೊಳಿಸಿತು. ಹೆಸರು ಬೆಳೆಯುವ ಹಂತದಲ್ಲಿ ಇದ್ದು, ಈ ಮಳೆಯಿಂದ ಹೆಚ್ಚಿನ ಅನುಕೂಲವಾದಂತಾಗಿದೆ. ರಭಸದ ಮಳೆಯಿಂದ ಕೆಲವೆಡೆ ಬದುಗಳು ಕೊಚ್ಚಿಕೊಂಡು ಹೋಗಿವೆ.</p>.<p>ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಜಮೀನು ಜಲಾವೃತವಾದವು.</p>.<p>ಪರದಾಟ: ಪಟ್ಟಣದಲ್ಲಿ ಸಂಜೆ 4 ಗಂಟೆ ಹೊತ್ತಿಗೆ ರಭಸದಿಂದ ಮಳೆ ಆರಂಭವಾಗಿದ್ದರಿಂದ ಚರಂಡಿ ತುಂಬಿ ಹರಿದವು. ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಶನಿವಾರವಾದರೂ ಕೆಲವು ಶಾಲೆಗಳು ಪೂರ್ಣ ದಿನ ನಡೆದ ಪರಿಣಾಮ ವಿದ್ಯಾರ್ಥಿಗಳು ಮನೆಗೆ ತೆರಳಲು ತೀವ್ರ ಪರದಾಡಿದರು.</p>.<p>ಕೆಲವು ರೈತರ ಆತಂಕ: ಮೊದಲು ಹೆಸರು ಬಿತ್ತನೆ ಮಾಡಿದ ರೈತರು ಈ ರಭಸದ ಮಳೆಯಿಂದ ಆತಂಕಗೊಳ್ಳುವಂತಾಗಿದೆ. ಅತಿ ತೇವಾಂಶ. ಹೆಚ್ಚಾಗಿ ಹಳದಿ ರೋಗಕ್ಕೆ ಹೆಸರು ಬೆಳೆ ತುತ್ತಾಗುವ ಲಕ್ಷಣಗಳು ಕಂಡು ಬರಬಹುದು ಎಂದು ರೈತರು. ಆತಂಕ ವ್ಯಕ್ತಪಡಿಸಿದರು.</p>.<p>ಆದರೆ ಹತ್ತಿ, ಮೆಕ್ಕೆಜೋಳ ಸೇರಿದಂತೆ ಕೆಲವು ಬೆಳೆಗಳಿಗೆ ಈ ಮಳೆ ವರದಾನವಾಗಿದೆ.</p>.<p><strong>ನರೇಗಲ್: ಉತ್ತಮ ಮಳೆ</strong></p>.<p>ನರೇಗಲ್: ಪಟ್ಟಣದ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಒಂದು ಉತ್ತಮವಾದ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.</p>.<p>ಮಧ್ಯಾಹ್ನ 1 ಗಂಟೆಗೆ ಜಿಟಿಜಿಟಿಯಾಗಿ ಆರಂಭವಾದ ಮಳೆ ನಂತರ ಜೋರಾಗಿ ಸುರಿದಿದೆ. ನಂತರ ಸಂಜೆ ವರೆಗೆ ಜಿಟಿಜಿಟಿಯಾಗಿ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>