114 ಸ್ಥಾನ ಇಟ್ಟುಕೊಂಡೇ ಈ ರೀತಿ ಮಾಡಿದೆ. ಇನ್ನೂ 140 ಸ್ಥಾನ ಬಂದರೆ ಆರ್ಎಸ್ಎಸ್, ಬಿಜೆಪಿ, ಬಜರಂಗ ದಳ, ಮಠಗಳು, ಬಿಜೆಪಿ ಪರವಾದ ಶಕ್ತಿಗಳು ಚಿಗುರಿಕೊಂಡರೆ ದೇಶಕ್ಕೆ ಭವಿಷ್ಯವಿಲ್ಲ' ಎಂದು ಎಚ್ಚರಿಸಿದರು.
`ಎರಡು ಸಾವಿರ ಜನರನ್ನು ಕೊಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಯಡಿಯೂರಪ್ಪ ಮತ್ತು ಮೋದಿ ಅವರು ಆರೋಪಿಗಳು ಅಪರಾಧಿಗಳಲ್ಲ' ಎಂಬ ಧರ್ಮ ಗುರುಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಹುಟ್ಟಿದ ಜಾತಿಯಲ್ಲಿಯೇ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ನಮ್ಮ ಮಠ ಸಂಸತ್ ಭವನ ಎಂಬುದನ್ನು ಮರೆಯ ಬಾರದು' ಎಂದರು.
ಗಾಂಧಿ, ಅಂಬೇಡ್ಕರ್, ಬಸವಣ್ಣರನ್ನು ಮತ್ತೆ ಹುಟ್ಟಿ ಬಾ ಎಂದರೆ ಸೋಲು ಒಪ್ಪಿಕೊಂಡಂತೆ. ಮನುಷ್ಯರಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸ ಬೇಕು ಎಂದರು.