ಗದಗ: ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ವಿವಾಹ ಸಮಾರಂಭ, ಮತದಾನ ಜಾಗೃತಿ ಕಾರ್ಯಕ್ರಮದ ವೇದಿಕೆಯಾಯಿತು. ‘ಮತ ಅಮೂಲ್ಯವಾದದು, ಮೇ 12ರಂದು ತಪ್ಪದೇ ಮತದಾನ ಮಾಡಿ’, ‘ನೋಟಿಗೆ ವೋಟ್ ಮಾರಿಕೊಳ್ಳದಿರಿ’, ‘ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಹೀಗೆ ಮತದಾನದ ಮಹತ್ವ ಸಾರುವ ಸಂದೇಶಗಳನ್ನು ಹಿಡಿದು ಮುಕುಂದ ಮತ್ತು ಸಂಗೀತಾ ಜೋಡಿ ಸಪ್ತಪದಿ ತುಳಿಯಿತು.