<p><strong>ಗದಗ: </strong>ಇಲ್ಲಿನ ಸ್ಪರ್ಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದ ಮೇಲೆ ಅಳವಡಿಸಿರುವ ಸೌರವಿದ್ಯುತ್ ಘಟಕವನ್ನು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಭಾನುವಾರ ಉದ್ಘಾಟಿಸಿದರು. ಬೆಂಗಳೂರು ಮೂಲದ ಆರ್ಬ್ ಎನರ್ಜಿ ಸಂಸ್ಥೆ ಈ ಘಟಕವನ್ನು ಅಳವಡಿಸಿದೆ.</p>.<p>‘ಸೌರವಿದ್ಯುತ್ ಬಳಕೆಯನ್ನು ಉತ್ತೇಜಿಸಬೇಕು. ಇಂತಹ ಪರಿಸರ ಸ್ನೇಹಿ ಇಂಧನ ಮೂಲಗಳ ಬಳಕೆಯಿಂದ ಜಲವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಡಾ.ಕೆ.ಡಿ. ಘೋಡ್ಕಿಂಡಿ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಕಟ್ಟಡದ ಮೇಲೆ ಸೌರವಿದ್ಯುತ್ ಘಟಕ ಅಳವಡಿಸಿಕೊಂಡಿರುವ ಡಾ. ದಾನೇಶ ದೇಸಾಯಿ ಅವರನ್ನು ಅಭಿನಂದಿಸಿದರು.</p>.<p>‘ವಿದ್ಯುತ್ ಕೊರತೆ ನೀಗಿಸುವಲ್ಲಿ ಸೌರವಿದ್ಯುತ್ ಬಳಕೆ ಅತ್ಯುತ್ತಮ ವಿಧಾನ’ ಎಂದು ಡಾ. ಸೋಲಮನ್ ಅಭಿಪ್ರಾಯಪಟ್ಟರು.</p>.<p>ಆರ್ಬ್ ಎನರ್ಜಿ ಸಂಸ್ಥೆಯ ವ್ಯವಸ್ಥಾಪಕ ಚೇತನ್, ಈ ಘಟಕದ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಮಧ್ಯಮ ಪ್ರಮಾಣದ (ಎಸ್ಎಂಇ) ಕೈಗಾರಿಕಾ ಸಂಸ್ಥೆಗಳಿಗೆ ಇಂತಹ ಘಟಕ ಅಳವಡಿಸಿಕೊಳ್ಳಲು ಸಾಲದ ನೆರವಿನೊಂದಿಗೆ ಸೌಲಭ್ಯ ಕಲ್ಪಿಸುತ್ತದೆ’ಎಂದರು.</p>.<p>ಬೂದೀಶ್ವರ ಸ್ವಾಮೀಜಿ, ಡಾ.ದಿಲೀಪ್ ಹೆಮ್ಮಾಡಿ, ಚಂದ್ರಶೇಖರ ಬಾಗಲಕೋಟೆ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಇಲ್ಲಿನ ಸ್ಪರ್ಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದ ಮೇಲೆ ಅಳವಡಿಸಿರುವ ಸೌರವಿದ್ಯುತ್ ಘಟಕವನ್ನು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಭಾನುವಾರ ಉದ್ಘಾಟಿಸಿದರು. ಬೆಂಗಳೂರು ಮೂಲದ ಆರ್ಬ್ ಎನರ್ಜಿ ಸಂಸ್ಥೆ ಈ ಘಟಕವನ್ನು ಅಳವಡಿಸಿದೆ.</p>.<p>‘ಸೌರವಿದ್ಯುತ್ ಬಳಕೆಯನ್ನು ಉತ್ತೇಜಿಸಬೇಕು. ಇಂತಹ ಪರಿಸರ ಸ್ನೇಹಿ ಇಂಧನ ಮೂಲಗಳ ಬಳಕೆಯಿಂದ ಜಲವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಡಾ.ಕೆ.ಡಿ. ಘೋಡ್ಕಿಂಡಿ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಕಟ್ಟಡದ ಮೇಲೆ ಸೌರವಿದ್ಯುತ್ ಘಟಕ ಅಳವಡಿಸಿಕೊಂಡಿರುವ ಡಾ. ದಾನೇಶ ದೇಸಾಯಿ ಅವರನ್ನು ಅಭಿನಂದಿಸಿದರು.</p>.<p>‘ವಿದ್ಯುತ್ ಕೊರತೆ ನೀಗಿಸುವಲ್ಲಿ ಸೌರವಿದ್ಯುತ್ ಬಳಕೆ ಅತ್ಯುತ್ತಮ ವಿಧಾನ’ ಎಂದು ಡಾ. ಸೋಲಮನ್ ಅಭಿಪ್ರಾಯಪಟ್ಟರು.</p>.<p>ಆರ್ಬ್ ಎನರ್ಜಿ ಸಂಸ್ಥೆಯ ವ್ಯವಸ್ಥಾಪಕ ಚೇತನ್, ಈ ಘಟಕದ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಮಧ್ಯಮ ಪ್ರಮಾಣದ (ಎಸ್ಎಂಇ) ಕೈಗಾರಿಕಾ ಸಂಸ್ಥೆಗಳಿಗೆ ಇಂತಹ ಘಟಕ ಅಳವಡಿಸಿಕೊಳ್ಳಲು ಸಾಲದ ನೆರವಿನೊಂದಿಗೆ ಸೌಲಭ್ಯ ಕಲ್ಪಿಸುತ್ತದೆ’ಎಂದರು.</p>.<p>ಬೂದೀಶ್ವರ ಸ್ವಾಮೀಜಿ, ಡಾ.ದಿಲೀಪ್ ಹೆಮ್ಮಾಡಿ, ಚಂದ್ರಶೇಖರ ಬಾಗಲಕೋಟೆ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>