<p><strong>ಹಾಸನ:</strong> ನಕಲಿ ಕೀ ಬಳಸಿ ಹಳೆಯ ಕಾರು, ಜೀಪ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರು ಅಂತರ<br />ಜಿಲ್ಲಾ ವಾಹನ ಕಳ್ಳರನ್ನು ಬಂಧಿಸಿರುವ ಸಕಲೇಶಪುರ ನಗರ ಠಾಣೆ ಪೊಲೀಸರು, ಒಟ್ಟು 20 ವಾಹನಗಳನ್ನು<br />ವಶಪಡಿಸಿಕೊಂಡಿದ್ದಾರೆ.</p>.<p>ಹುಣಸೂರು ಪಟ್ಟಣದ ಶಬ್ಬೀರ್ ನಗರದ ನಿವಾಸಿಗಳಾದ ಮೊಯ್ದು ಕುನ್ನಿ, ಮಹಮದ್ ರಫೀಕ್,<br />ಕೆ.ಆರ್.ನಗರದ ಚಿಕ್ಕಮಸೀದಿ ರಸ್ತೆಯ ಅಫ್ರೋಜ್ ಖಾನ್, ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ<br />ಗ್ರಾಮದ ಖಾದರ ಷರೀಫ್, ಸೈಯದ್ ಅಜ್ಮಲ್, ಮಹಮದ್ ಮುಬರಾಕ್ ನನ್ನು ಬಂಧಿಸಲಾಗಿದೆ ಎಂದು<br />ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದರು.</p>.<p>ಆರೋಪಿಗಳು ಸಕಲೇಶಪುರ, ಹಾಸನ, ಹೊಳೆನರಸೀಪುರ, ಸುಬ್ರಹ್ಮಣ್ಯ, ಪುತ್ತೂರು ಸೇರಿದಂತೆ ನಾನಾ<br />ಕಡೆ ಕಳ್ಳತನ ಮಾಡಿದ್ದ ಒಂದು ಆಲ್ಟೊ, ಎರಡು ಮಾರುತಿ 800, ಮೂರು ಮಾರುತಿ ಓಮಿನಿ ಸೇರಿ 20 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ ₹44 ಲಕ್ಷ ಆಗಿದೆ ಎಂದರು.</p>.<p>ಸಕಲೇಶಪುರ ವೃತ್ತದಲ್ಲಿ 2018ರಿಂದಲೂ ವಾಹನಗಳ ಕಳವು ಪ್ರಕರಣ ವರದಿಯಾಗಿತ್ತು. ಆರೋಪಿಗಳ<br />ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪ್ರಮುಖ ಆರೋಪಿಗಳಾದ ಮೊಯ್ದು ಕುನ್ನಿ ಹಾಗೂ<br />ಮಹಮ್ಮದ್ ರಫೀಕ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೆನರಸೀಪುರ ಹಾಗೂ ಯಾತ್ರಾ<br />ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರನ್ನು ಗುರಿಯಾಗಿಸಿಕೊಂಡು ನಕಲಿ ಕೀ<br />ಬಳಸಿ ಕಳವು ಮಾಡುತ್ತಿದ್ದರು. ನಂತರ ಆಫ್ರೋಜ್ ಖಾನ್ ಮೂಲಕ ಗುಜರಿ ಅಂಗಡಿಗಳಲ್ಲಿ ಇರುತ್ತಿದ್ದ<br />ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್ಗಳನ್ನು ಕಳವು ವಾಹನಗಳಿಗೆ<br />ಪಂಚಿಂಗ್ ಮಾಡಿಸಿ, ವಿಮೆ ಪಾವತಿಸಿ, ನಕಲಿ ನೋಂದಣಿ ಪ್ರಮಾಣ ಪತ್ರ ಸಿದ್ದಪಡಿಸಿ ಮಾರಾಟ<br />ಮಾಡುತ್ತಿದ್ದರು ಎಂದು ವಿವರಿಸಿದರು.</p>.<p>ಆರ್ಟಿಒ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಖಾದರ್ ಶರೀಫ್, ಸೈಯದ್ ಅಜಮಲ್,<br />ಮಹಮ್ಮದ್ ಮುಬಾರಕ್ ಸಹ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದರು.<br /><br />ಹಳೆಯ ವಾಹನಗಳಿಗೆ ಹೆಚ್ಚು ಬೇಡಿಕೆ ಇದ್ದ ಕಾರಣ ಕಳವು ವಾಹನಗಳನ್ನು ಆರೋಪಿಗಳು ಗ್ರಾಮೀಣ<br />ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸಕಲೇಶಪುರ ವೃತ್ತದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ<br />ಸಂದರ್ಭದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಬರುತ್ತಿದ್ದ ಮಾರುತಿ 800 ತಡೆದು ವಿಚಾರಣೆಗೆ ಒಳಪಡಿಸಿದಾಗ<br />ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.</p>.<p>ಆರೋಪಿ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಡಿವೈಎಸ್ಪಿ ಗೋಪಿ, ಸಿಪಿಐ ಗಿರೀಶ್, ಪೊಲೀಸ್<br />ಸಬ್ ಇನ್ಸ್ಪೆಕ್ಟರ್ಗಳಾದ ಬಸವರಾಜ ಚಿಂಚೋಲಿ, ಕೆ.ಎನ್.ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ<br />ನಗರಾಜ್, ಲೋಕೇಶ್, ಸತೀಶ್, ಸುನಿಲ್, ಪೃಥ್ವಿ, ಹೇಮಂತ ಕುಮಾರ್, ಪೀರ್ಖಾನ್, ಹರೀಶ್, ಮಧು,<br />ಅಶೋಕ್ ಅವರಿಗೆ ವಿಶೇಷ ಬಹುಮಾನ ಘೋಷಿಸಿದರು.</p>.<p>ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ನಕಲಿ ಕೀ ಬಳಸಿ ಹಳೆಯ ಕಾರು, ಜೀಪ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರು ಅಂತರ<br />ಜಿಲ್ಲಾ ವಾಹನ ಕಳ್ಳರನ್ನು ಬಂಧಿಸಿರುವ ಸಕಲೇಶಪುರ ನಗರ ಠಾಣೆ ಪೊಲೀಸರು, ಒಟ್ಟು 20 ವಾಹನಗಳನ್ನು<br />ವಶಪಡಿಸಿಕೊಂಡಿದ್ದಾರೆ.</p>.<p>ಹುಣಸೂರು ಪಟ್ಟಣದ ಶಬ್ಬೀರ್ ನಗರದ ನಿವಾಸಿಗಳಾದ ಮೊಯ್ದು ಕುನ್ನಿ, ಮಹಮದ್ ರಫೀಕ್,<br />ಕೆ.ಆರ್.ನಗರದ ಚಿಕ್ಕಮಸೀದಿ ರಸ್ತೆಯ ಅಫ್ರೋಜ್ ಖಾನ್, ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ<br />ಗ್ರಾಮದ ಖಾದರ ಷರೀಫ್, ಸೈಯದ್ ಅಜ್ಮಲ್, ಮಹಮದ್ ಮುಬರಾಕ್ ನನ್ನು ಬಂಧಿಸಲಾಗಿದೆ ಎಂದು<br />ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದರು.</p>.<p>ಆರೋಪಿಗಳು ಸಕಲೇಶಪುರ, ಹಾಸನ, ಹೊಳೆನರಸೀಪುರ, ಸುಬ್ರಹ್ಮಣ್ಯ, ಪುತ್ತೂರು ಸೇರಿದಂತೆ ನಾನಾ<br />ಕಡೆ ಕಳ್ಳತನ ಮಾಡಿದ್ದ ಒಂದು ಆಲ್ಟೊ, ಎರಡು ಮಾರುತಿ 800, ಮೂರು ಮಾರುತಿ ಓಮಿನಿ ಸೇರಿ 20 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ ₹44 ಲಕ್ಷ ಆಗಿದೆ ಎಂದರು.</p>.<p>ಸಕಲೇಶಪುರ ವೃತ್ತದಲ್ಲಿ 2018ರಿಂದಲೂ ವಾಹನಗಳ ಕಳವು ಪ್ರಕರಣ ವರದಿಯಾಗಿತ್ತು. ಆರೋಪಿಗಳ<br />ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪ್ರಮುಖ ಆರೋಪಿಗಳಾದ ಮೊಯ್ದು ಕುನ್ನಿ ಹಾಗೂ<br />ಮಹಮ್ಮದ್ ರಫೀಕ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೆನರಸೀಪುರ ಹಾಗೂ ಯಾತ್ರಾ<br />ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರನ್ನು ಗುರಿಯಾಗಿಸಿಕೊಂಡು ನಕಲಿ ಕೀ<br />ಬಳಸಿ ಕಳವು ಮಾಡುತ್ತಿದ್ದರು. ನಂತರ ಆಫ್ರೋಜ್ ಖಾನ್ ಮೂಲಕ ಗುಜರಿ ಅಂಗಡಿಗಳಲ್ಲಿ ಇರುತ್ತಿದ್ದ<br />ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್ಗಳನ್ನು ಕಳವು ವಾಹನಗಳಿಗೆ<br />ಪಂಚಿಂಗ್ ಮಾಡಿಸಿ, ವಿಮೆ ಪಾವತಿಸಿ, ನಕಲಿ ನೋಂದಣಿ ಪ್ರಮಾಣ ಪತ್ರ ಸಿದ್ದಪಡಿಸಿ ಮಾರಾಟ<br />ಮಾಡುತ್ತಿದ್ದರು ಎಂದು ವಿವರಿಸಿದರು.</p>.<p>ಆರ್ಟಿಒ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಖಾದರ್ ಶರೀಫ್, ಸೈಯದ್ ಅಜಮಲ್,<br />ಮಹಮ್ಮದ್ ಮುಬಾರಕ್ ಸಹ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದರು.<br /><br />ಹಳೆಯ ವಾಹನಗಳಿಗೆ ಹೆಚ್ಚು ಬೇಡಿಕೆ ಇದ್ದ ಕಾರಣ ಕಳವು ವಾಹನಗಳನ್ನು ಆರೋಪಿಗಳು ಗ್ರಾಮೀಣ<br />ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸಕಲೇಶಪುರ ವೃತ್ತದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ<br />ಸಂದರ್ಭದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಬರುತ್ತಿದ್ದ ಮಾರುತಿ 800 ತಡೆದು ವಿಚಾರಣೆಗೆ ಒಳಪಡಿಸಿದಾಗ<br />ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.</p>.<p>ಆರೋಪಿ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಡಿವೈಎಸ್ಪಿ ಗೋಪಿ, ಸಿಪಿಐ ಗಿರೀಶ್, ಪೊಲೀಸ್<br />ಸಬ್ ಇನ್ಸ್ಪೆಕ್ಟರ್ಗಳಾದ ಬಸವರಾಜ ಚಿಂಚೋಲಿ, ಕೆ.ಎನ್.ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ<br />ನಗರಾಜ್, ಲೋಕೇಶ್, ಸತೀಶ್, ಸುನಿಲ್, ಪೃಥ್ವಿ, ಹೇಮಂತ ಕುಮಾರ್, ಪೀರ್ಖಾನ್, ಹರೀಶ್, ಮಧು,<br />ಅಶೋಕ್ ಅವರಿಗೆ ವಿಶೇಷ ಬಹುಮಾನ ಘೋಷಿಸಿದರು.</p>.<p>ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>