ಒಂದು ಹೆಕ್ಟೇರ್ ಜಮೀನಿನಲ್ಲಿ ಶುಂಠಿ ಬೆಳೆಯುವ ಉದ್ದೇಶದಿಂದ ರೈತ ಶಿವಣ್ಣ 60 ಚೀಲ ಶುಂಠಿಯನ್ನು ಬೀಜೋಪಚಾರ ಮಾಡಿ ಇಟ್ಟಿದ್ದರು. ಅದರ ಪಕ್ಕದಲ್ಲೇ ಹೊದಿಕೆಗೆ ತಂದಿರುವ ಹುಲ್ಲನ್ನು ಸಹ ಇಟ್ಟಿದ್ದರು. ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ್ದಾರೆ. ಶುಂಠಿ ಬಹುತೇಕ ಹಾಳಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದರು.