‘ಫೆ. 13ರಂದು ಪಟ್ಟಣದ ಶನೇಶ್ವರ ಕಲಾ ತಂಡದವರಿಂದ ‘ರಾಜಾ ಸತ್ಯವ್ರತ’ ಅರ್ಥಾತ್ ‘ಶನಿ ಪ್ರಭಾವ’, ಫೆ. 14ರಂದು ಮಂಡ್ಯ ಜಿಲ್ಲೆ ನೇರಲಗೆರೆಯ ಶಂಭುಲಿಂಗೇಶ್ವರ ಕಲಾ ತಂಡದವರಿಂದ ‘ದಕ್ಷಯಜ್ಞ’, ಫೆ. 15ರಂದು ಅರಕಲಗೂಡು ದೊಡ್ಡಮ್ಮ ದೇವಿ ಕಲಾ ತಂಡದಿಂದ ‘ಕುರುಕ್ಷೇತ್ರ’, ಫೆ. 16ರಂದು ಬೆಂಗಳೂರು ಅನೇಕಲ್ನ ಗಡಿನಾಡು ರಂಗಭೂಮಿ ಕಲಾವಿದರ ಸಂಘದಿಂದ ‘ದಕ್ಷಯಜ್ಞ’, ಫೆ. 17ರಂದು ಮೈಸೂರಿನ ಹೆಬ್ಬಾಳ್ ಸಾಂಸ್ಕೃತಿಕ ವೇದಿಕೆಯವರಿಂದ ‘ಧರ್ಮ ರಾಜ್ಯ ಸ್ಥಾಪನೆ’, ಫೆ. 18ರಂದು ತಾಲ್ಲೂಕಿನ ಬಿದರೂರು ಗ್ರಾಮದ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯವರಿಂದ ‘ಶ್ರೀಕೃಷ್ಣ ಸಂಧಾನ’ ನಾಟಕಗಳು ಪ್ರದರ್ಶಿತವಾಗಲಿದೆ’ ಎಂದು ಮಾಹಿತಿ ನೀಡಿದರು.