ಜಿಲ್ಲಾಸ್ಪತ್ರೆಗೆ ಹಾಸನ ಮಾತ್ರವಲ್ಲದೆ, ಚಿಕ್ಕಮಗಳೂರು, ಮಂಡ್ಯ, ಮಡಿಕೇರಿ ಮೊದಲಾದ ಜಿಲ್ಲೆಗಳಿಂದಲೂ ದಿನಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಕಳೆದ ಶನಿವಾರ 2 ಸಾವಿರಕ್ಕೂ ಅಧಿಕ ರೋಗಿಗಳು ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಶುಕ್ರವಾರದಿಂದ ಶನಿವಾರದವರೆಗೆ 881 ಮಂದಿ ಬಂದು ಹೋಗಿದ್ದಾರೆ. ಇದಕ್ಕೆ ಗ್ರಹಣ ಪರಿಣಾಮ ಪ್ರಮುಖ ಎಂದು ಹೇಳಲಾಗುತ್ತಿದೆ.
‘ಗ್ರಾಮೀಣ ಜನರು, ಗ್ರಹಣದ ವೇಳೆಯಲ್ಲಿ ಮಕ್ಕಳು ಜನಿಸಿದರೆ ಅಶುಭ ಎಂದು ಭ್ರಮಿಸಿ ಹೆರಿಗೆ ನೋವು ಕಾಣಿಸಿಕೊಂಡರೂ ಜಿಲ್ಲಾಸ್ಪತ್ರೆಗೆ ಬಂದಿಲ್ಲ. ಬದಲಾಗಿ ಇಂದು ಬೆಳಿಗ್ಗೆ ಗರ್ಭಿಣಿಯರನ್ನು ಕರೆತಂದಿದ್ದಾರೆ. ಏಕೆ ಹೀಗೆ ಎಂದು ಪ್ರಶ್ನಿಸಿದರೆ, ಜ್ಯೋತಿಷಿಗಳು ಹಾಗಂದ್ರು, ನೆರೆಹೊರೆಯವರು ಹೀಗಂದ್ರು. ಇದೇ ಭಯದಿಂದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದು ಕೊಂಡು ಬರಲಿಲ್ಲ ಎಂದು ಪೋಷಕರು ಉತ್ತರಿಸಿದರು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್ ತಿಳಿಸಿದರು.