ಸೆರೆ ಸಿಕ್ಕಿರುವ ಎರಡೂವರೆ ವರ್ಷದ ಹೆಣ್ಣು ಚಿರತೆ ಹಳೇ ಕೊಪ್ಪಲು ವ್ಯಾಪ್ತಿಯ ಐದಾರು ಹಳ್ಳಿಗಳ ಜನರಲ್ಲಿ ಭಯ ಹುಟ್ಟಿಸಿತ್ತು. ಮಂಟಿ, ಕಲ್ಲುಕೋರೆಯಲ್ಲಿ ಅಡಗಿ ಕುಳಿತು ರಾತ್ರಿ ಗ್ರಾಮಗಳಿಗೆ ನುಗ್ಗಿ ಕುರಿ, ಆಡು, ಕರು ಹಾಗೂ ನಾಯಿಗಳನ್ನು ಬೇಟೆಯಾಡುತ್ತಿತ್ತು.
‘ಈ ಭಾಗದಲ್ಲಿ ಮೂರ್ನಾಲ್ಕು ಚಿರತೆಗಳಿವೆ. ಆರು ತಿಂಗಳ ಹಿಂದೆ ಒಂದು ಚಿರತೆ ಸೆರೆ ಹಿಡಿಯಲಾಗಿತ್ತು. ಅದಾದ ಬಳಿಕವೂ ತಾಯಿ ಹಾಗೂ ಮರಿ ಚಿರತೆ ಜನರಿಗೆ ತೊಂದರೆ ನೀಡುತ್ತಿವೆ. ಹಳೇಕೊಪ್ಪಲು, ಗೌರಿಪುರ, ದೊಡ್ಡ ಕೊಂಡಗೊಳ, ಚಿಟ್ಟನಹಳ್ಳಿ ಭಾಗದಲ್ಲಿ ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ಹತ್ತಾರು ಸಾಕು ಪ್ರಾಣಿಗಳನ್ನು ತಿಂದು ಹಾಕಿವೆ’ ಎಂದು ಸ್ಥಳೀಯ ನಿವಾಸಿ ಮೋಹನ್ ಅಳಲು ತೋಡಿಕೊಂಡರು.
‘ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಖಾಸಗಿ ಜಮೀನಿನಲ್ಲಿ ಬೋನಿಡಲಾಗಿತ್ತು. ಅದರೊಳಗೆ ನಾಯಿ ಕಟ್ಟಲಾಗಿತ್ತು. ನಾಯಿ ತಿನ್ನುವ ಆಸೆಯಿಂದ ರಾತ್ರಿ ಬೋನಿಗೆ ನುಗ್ಗಿದ ಚಿರತೆ ಬಂಧಿಯಾಗಿದೆ. ಸದ್ಯಕ್ಕೆ ಚಿರತೆ ಆರೋಗ್ಯವಾಗಿದ್ದು, ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದರು.