ಫೆ.15 ರಂದು ಸೇವಾಲಾಲ್ ಅವರ ಲೇಖನವನ್ನು ಪ್ರಕಟಣೆ ಮಾಡಿದ್ದೇವೆ. ಬಂಜಾರ ಸಮುದಾಯದವರು ಮೊಹಂಜೋದಾರ್ ನಾಗರಿಕರ ಕಾಲದಲ್ಲಿ ಕಂಡುಬಂದ ಸಮುದಾಯ. ಅತ್ಯಂತ ಶಕ್ತಿಶಾಲಿ ದಂಡನಾಯಕ, ವೀರರು ಇದ್ದಾರೆ. ಡಚ್ಚರು, ಮೊಘಲ್ ದೊರೆಗಳ ಉಪಟಳವನ್ನು ತಡೆದು, ಸಾಂಬಾರ ಪದಾರ್ಥ ಮತ್ತು ಉಪ್ಪನ್ನು ಭಾರತಕ್ಕೆ ಮಾರಾಟ ಮಾಡುವಂತೆ ಮಾಡಿದವರು ಎಂದರೆ ಬಂಜಾರ ಸಮುದಾಯದವರು. ಸೇವಾಲಾಲ್ ಅವರು ಗೋವುಗಳ ರಕ್ಷಣೆಯನ್ನು ಬಾಲ್ಯದಲ್ಲೇ ಮಾಡುತ್ತಿದ್ದರು. ತ್ರಿಕಾಲ ಜ್ಞಾನಿ. ತಮ್ಮ ತಾಯಿಯ ಕೃಪೆಯಿಂದ ಜನರಿಗೆ ಜ್ಞಾನ, ಶಿಕ್ಷಣವನ್ನು ನೀಡಿದರು. ಬಂಜಾರ ಸಮುದಾಯದವರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು ಎಂದು ತಿಳಿಸಿದರು.