‘ರಾಜ್ಯದಲ್ಲಿ ಕೋವಿಡ್ನಿಂದ ಜನ ತತ್ತರಿಸಿ ಹೋಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ತುತ್ತುಕೂಳಿಗಾಗಿ ಪರಿತಪಿಸುತ್ತಿದ್ದಾರೆ. ಜತೆಗೆ ಇಂಧನ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳಬೆಲೆ ಗಗನಕ್ಕೆ ಏರಿದೆ. ಲಾಕ್ಡೌನ್ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.ಜನ ಸಾಮಾನ್ಯರ ಈ ಯಾವುದೇ ಸಮಸ್ಯೆಗಳಿಗೆ ಧ್ವನಿ ಎತ್ತದ ಮಠಾಧೀಶರು ಈಗಯಡಿಯೂರಪ್ಪ ಪರವಾಗಿ ಒತ್ತಾಯ ಮಾಡುತ್ತಿರುವುದು ನೈತಿಕ ಮೌಲ್ಯಗಳ ಅಧಃಪತನದ ದ್ಯೋತಕ’ ಎಂದು ಆರೋಪಿಸಿದರು.