<p><strong>ಹಾಸನ: </strong>ಮುಂದಿನ ದಿನಗಳಲ್ಲಿ ಪ್ರಪಂಚವನ್ನು ಸ್ತ್ರಿಯರೇ ಆಳುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು<br />ಶರ್ಮಾ ಭವಿಷ್ಯ ನುಡಿದರು.</p>.<p>ಹಾಸನಾಂಬ ದೇವಿ ದರ್ಶನ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೂ ಮೂರು ವರ್ಷ ಪ್ರಪಂಚ<br />ಸಂಕಷ್ಟಗಳ ಸರಮಾಲೆಯಲ್ಲೇ ಇರಬೇಕಿದೆ. ಮೂರನೇ ಮಹಾಯುದ್ಧ ಆಗುವುದು ಶತ ಸಿದ್ಧ. ಸ್ತ್ರೀಯರು ಜಗತ್ತನ್ನು<br />ಆಳುತ್ತಾರೆ. ಅಮೆರಿಕಾ, ಲಂಡನ್, ಆಫ್ರಿಕಾ, ಜಪಾನ್, ನೇಪಾಳ ಹಾಗೂ ಸಿಂಗಪುರ ರಾಜಕೀಯ ಕ್ಷೇತ್ರದಲ್ಲಿ ಭಾರತದ<br />ಮಹಿಳೆಯರು ಮಿಂಚುತ್ತಾರೆ ಎಂದು ಹೇಳಿದರು.</p>.<p>ಮೂರು ಮುಖ್ಯಮಂತ್ರಿಗಳ ಆಡಳಿತಾವಧಿ ನಂತರ ಕರ್ನಾಟಕವೂ ಆಂಧ್ರ-ತೆಲಂಗಾಣದಂತೆ ಒಡೆದು ಹೋಳಾಗುತ್ತದೆ.<br />ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರ ಬಿಂದುವಾದರೆ ಬೆಂಗಳೂರು ದಕ್ಷಿಣದ ರಾಜಧಾನಿ ಆಗಿರುತ್ತದೆ.<br />ವರ್ಷಾಂತ್ಯದಲ್ಲಿ ರಾಜ್ಯದ ಸಿ.ಎಂ ಕೂಡ ಬದಲಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ<br />ಗೆಲುವು ಸಾಧಿಸಿದರೂ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ. ಅದಕ್ಕಾಗಿ ಒಂದು ತಂಡ<br />ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಅವರು ವೈರಾಗ್ಯದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು<br />ಪ್ರತಿಕ್ರಿಯಿಸಿದರು.</p>.<p>ಇಂದಿರಾ ಗಾಂಧಿ ಹತ್ಯೆಯಂತಹ ಅಪಾಯ ನರೇಂದ್ರ ಮೋದಿ ಅವರಿಗೂ ಕಾದಿದೆ. ಜಾತಕದ ಪ್ರಕಾರ ಅವರು ತಾಯಿ<br />ಅಥವಾ ಹೆಂಡತಿ ಜತೆಗೆ ಇರಬೇಕು. ಮೋದಿ ತಮ್ಮ ಸುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.</p>.<p>ಬೆಂಗಳೂರಿಗೆ ಜಲ ಗಂಡಾಂತರ ಇನ್ನೂ ತಪ್ಪಿಲ್ಲ. ಕೆರೆ ಕಟ್ಟೆಗಳನ್ನೆಲ್ಲ ನಾಶಪಡಿಸಿ ಮನೆ ಕಟ್ಟಿಕೊಂಡಿರುವ<br />ರಾಜಕಾರಣಿಗಳ ಹೀನ ಕೃತ್ಯಕ್ಕೆ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಕೆರೆ ಒಡೆಯುವ ಮನೆ ಹಾಳು<br />ಕೆಲಸಕ್ಕೆ ಯಾರೂ ಹೋಗಬಾರದಿತ್ತು. ಮುಂದಿನ ಒಂದೂವರೆ ವರ್ಷ ಜಲ ಅವಾಂತರಗಳಿಂದ ಎಚ್ಚರವಾಗಿರಬೇಕು<br />ಎಂದರು.</p>.<p>ಹಿಂದುಗಳ ಪಾಲಿನ ಪವಿತ್ರ ಧಾರ್ಮಿಕ ಸ್ಥಳವಾಗಿರುವ ತಿರುಪತಿಯಲ್ಲಿ ವೆಂಕಟರಮಣ ಬದಲಿಗೆ ನರಸಿಂಹ ಅಸ್ತಿತ್ವ<br />ತಾಳುತ್ತಾನೆ. ಲಕ್ಷ್ಮಿ ಹಾಗೂ ವಿಷ್ಣುವಿನ ಸೇರ್ಪಡೆಯಿಂದ ನರಸಿಂಹನ ಅವತಾರ ಕಾಣಬೇಕಾಗುತ್ತದೆ. ಗುಜರಾತ್ನಲ್ಲಿ<br />ನಿರ್ಮಿಸಿರುವ ಸರ್ದಾರ್ ವಲಭಾಯಿ ಪಟೇಲ್ ಪ್ರತಿಮೆಗೂ ಕಂಟಕ ತಪ್ಪಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಮುಂದಿನ ದಿನಗಳಲ್ಲಿ ಪ್ರಪಂಚವನ್ನು ಸ್ತ್ರಿಯರೇ ಆಳುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು<br />ಶರ್ಮಾ ಭವಿಷ್ಯ ನುಡಿದರು.</p>.<p>ಹಾಸನಾಂಬ ದೇವಿ ದರ್ಶನ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೂ ಮೂರು ವರ್ಷ ಪ್ರಪಂಚ<br />ಸಂಕಷ್ಟಗಳ ಸರಮಾಲೆಯಲ್ಲೇ ಇರಬೇಕಿದೆ. ಮೂರನೇ ಮಹಾಯುದ್ಧ ಆಗುವುದು ಶತ ಸಿದ್ಧ. ಸ್ತ್ರೀಯರು ಜಗತ್ತನ್ನು<br />ಆಳುತ್ತಾರೆ. ಅಮೆರಿಕಾ, ಲಂಡನ್, ಆಫ್ರಿಕಾ, ಜಪಾನ್, ನೇಪಾಳ ಹಾಗೂ ಸಿಂಗಪುರ ರಾಜಕೀಯ ಕ್ಷೇತ್ರದಲ್ಲಿ ಭಾರತದ<br />ಮಹಿಳೆಯರು ಮಿಂಚುತ್ತಾರೆ ಎಂದು ಹೇಳಿದರು.</p>.<p>ಮೂರು ಮುಖ್ಯಮಂತ್ರಿಗಳ ಆಡಳಿತಾವಧಿ ನಂತರ ಕರ್ನಾಟಕವೂ ಆಂಧ್ರ-ತೆಲಂಗಾಣದಂತೆ ಒಡೆದು ಹೋಳಾಗುತ್ತದೆ.<br />ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರ ಬಿಂದುವಾದರೆ ಬೆಂಗಳೂರು ದಕ್ಷಿಣದ ರಾಜಧಾನಿ ಆಗಿರುತ್ತದೆ.<br />ವರ್ಷಾಂತ್ಯದಲ್ಲಿ ರಾಜ್ಯದ ಸಿ.ಎಂ ಕೂಡ ಬದಲಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ<br />ಗೆಲುವು ಸಾಧಿಸಿದರೂ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ. ಅದಕ್ಕಾಗಿ ಒಂದು ತಂಡ<br />ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಅವರು ವೈರಾಗ್ಯದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು<br />ಪ್ರತಿಕ್ರಿಯಿಸಿದರು.</p>.<p>ಇಂದಿರಾ ಗಾಂಧಿ ಹತ್ಯೆಯಂತಹ ಅಪಾಯ ನರೇಂದ್ರ ಮೋದಿ ಅವರಿಗೂ ಕಾದಿದೆ. ಜಾತಕದ ಪ್ರಕಾರ ಅವರು ತಾಯಿ<br />ಅಥವಾ ಹೆಂಡತಿ ಜತೆಗೆ ಇರಬೇಕು. ಮೋದಿ ತಮ್ಮ ಸುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.</p>.<p>ಬೆಂಗಳೂರಿಗೆ ಜಲ ಗಂಡಾಂತರ ಇನ್ನೂ ತಪ್ಪಿಲ್ಲ. ಕೆರೆ ಕಟ್ಟೆಗಳನ್ನೆಲ್ಲ ನಾಶಪಡಿಸಿ ಮನೆ ಕಟ್ಟಿಕೊಂಡಿರುವ<br />ರಾಜಕಾರಣಿಗಳ ಹೀನ ಕೃತ್ಯಕ್ಕೆ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಕೆರೆ ಒಡೆಯುವ ಮನೆ ಹಾಳು<br />ಕೆಲಸಕ್ಕೆ ಯಾರೂ ಹೋಗಬಾರದಿತ್ತು. ಮುಂದಿನ ಒಂದೂವರೆ ವರ್ಷ ಜಲ ಅವಾಂತರಗಳಿಂದ ಎಚ್ಚರವಾಗಿರಬೇಕು<br />ಎಂದರು.</p>.<p>ಹಿಂದುಗಳ ಪಾಲಿನ ಪವಿತ್ರ ಧಾರ್ಮಿಕ ಸ್ಥಳವಾಗಿರುವ ತಿರುಪತಿಯಲ್ಲಿ ವೆಂಕಟರಮಣ ಬದಲಿಗೆ ನರಸಿಂಹ ಅಸ್ತಿತ್ವ<br />ತಾಳುತ್ತಾನೆ. ಲಕ್ಷ್ಮಿ ಹಾಗೂ ವಿಷ್ಣುವಿನ ಸೇರ್ಪಡೆಯಿಂದ ನರಸಿಂಹನ ಅವತಾರ ಕಾಣಬೇಕಾಗುತ್ತದೆ. ಗುಜರಾತ್ನಲ್ಲಿ<br />ನಿರ್ಮಿಸಿರುವ ಸರ್ದಾರ್ ವಲಭಾಯಿ ಪಟೇಲ್ ಪ್ರತಿಮೆಗೂ ಕಂಟಕ ತಪ್ಪಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>