<p><strong>ಹಾಸನ:</strong> ನಗರದ ನರ್ಸಿಂಗ್ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿದೆ.</p>.<p>ಪರೀಕ್ಷೆಗೆ ಹಾಜರಾಗಲು ಕೇರಳದಿಂದ ಬಂದಿದ್ದ ನಗರದ ನಿಸರ್ಗ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಿದಾಗ, ಸೋಂಕು ಇರುವುದು ಗೊತ್ತಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳು ಕೆ.ಆರ್.ಪುರಂ ನಲ್ಲಿರುವ ಅತಿಥಿ ಪಿ.ಜಿಯಲ್ಲಿ ವಾಸಿಸುತ್ತಿದ್ದಾರೆ.</p>.<p>ಸೋಂಕು ತಗುಲಿದ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಸಂರ್ಪಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಶ್ರೀರಂಗ ವಸತಿ ಗೃಹದಲ್ಲಿಕ್ವಾರಂಟೈನ್ ಮಾಡಿ, ಸೀಲ್ಡೌನ್ ಮಾಡಲಾಗಿದೆ. ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, ಶುಕ್ರವಾರ ವರದಿ ಬರಲಿದೆ.</p>.<p>‘ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ 19 ದೃಢಪಟ್ಟಿರುವುದರಿಂದ ಕ್ವಾರಂಟೈನ್ಮಾಡಲಾಗಿದೆ. ಈ ವಿದ್ಯಾರ್ಥಿಗಳು ಇಪ್ಪತ್ತು ದಿನಗಳ ಹಿಂದೆಯೇ ಬಂದಿದ್ದು, ಎಲ್ಲರೂ ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಪ್ರಮಾಣ ಪತ್ರ ಹಾಜರು ಪಡಿಸಿದ್ದಾರೆ.ಕೇರಳದಿಂದ ಜಿಲ್ಲೆಗೆ ಬರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ತಪಾಸಣೆಗೆ ಒಳಪಡಿಸಿ, ಪಾಸಿಟಿವ್ ಬಂದವರನ್ನು ಹೋಮ್ ಐಸೋಲೇಶನ್ನಲ್ಲಿಇರಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ತಿಳಿಸಿದರು.</p>.<p><a href="https://www.prajavani.net/india-news/over-crore-69-laks-unutilised-vaccine-doses-still-available-with-states-private-hospitals-says-854967.html" itemprop="url">ಬಳಕೆಯಾಗದ 2.69 ಕೋಟಿ ಡೋಸ್ನಷ್ಟು ಲಸಿಕೆ ರಾಜ್ಯಗಳ ಬಳಿ ಇದೆ: ಕೇಂದ್ರ ಸರ್ಕಾರ </a></p>.<p>ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಸಾಂಕ್ರಮಿಕತೆಯ ಮೂರನೇ ಅಲೆಯ ಭೀತಿಎದುರಾಗಿದೆ. ಕೇರಳದಿಂದ ವಿದ್ಯಾಭ್ಯಾಸ, ವ್ಯಾಪಾರ ವಹಿವಾಟು, ಮತ್ತಿತರ ಕಾರಣಗಳಿಂದಜಿಲ್ಲೆಗೆ ನೂರಾರು ಜನರು ಭೇಟಿ ನೀಡುತ್ತಾರೆ. ಚನ್ನರಾಯಪಟ್ಟಣಕ್ಕೆ ನಿತ್ಯವೂ ಆರು ಬಸ್ಗಳುಮುಂಬೈನಿಂದ ಬರುತ್ತಿವೆ. ಅರಸೀಕೆರೆ ರೈಲ್ವೆ ಜಂಕ್ಷನ್ಗೆ ಮುಂಬೈನಿಂದ ರೈಲುಗೆ ಬರುತ್ತವೆ.ಹಾಗಾಗಿ ಜಿಲ್ಲೆಯಲ್ಲಿ ಮೂರನೇ ಅಲೆ ಭೀತಿ ಹುಟ್ಟಿಸಿದೆ.</p>.<p>‘ಹೋಮ್ ಸ್ಟೇ ಮತ್ತು ರೆಸಾರ್ಟ್ಗಳಿಗೆ ಆಗಮಿಸುವ ಅತಿಥಿಗಳು 73 ಗಂಟೆ ಮುಂಚಿತವಾಗಿಪರೀಕ್ಷೆಗೆ ಒಳಪಟ್ಟ ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಇರುವ ಪ್ರಮಾಣ ಪತ್ರವನ್ನುಹಾಜರುಪಡಿಸಬೇಕು. ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು ರೈಲ್ವೆ ಮತ್ತು ಬಸ್ನಿಲ್ದಾಣಗಳಿಗೆ ಹೊರ ರಾಜ್ಯಗಳಿಂದ ಬರುರವ ಪ್ರಯಾಣಿಕರನ್ನು ಗುರುತಿಸಿ ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ ಹಾಗೂ ಅಂತಹ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುವುದು’ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.</p>.<p><a href="https://www.prajavani.net/world-news/delta-variant-now-reported-in-135-countries-global-coronavirus-cases-could-exceed-200-million-by-854968.html" itemprop="url">ಕೋವಿಡ್ 19: 135 ದೇಶಗಳಲ್ಲಿ ವ್ಯಾಪಿಸಿರುವ ಡೆಲ್ಟಾ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ನಗರದ ನರ್ಸಿಂಗ್ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿದೆ.</p>.<p>ಪರೀಕ್ಷೆಗೆ ಹಾಜರಾಗಲು ಕೇರಳದಿಂದ ಬಂದಿದ್ದ ನಗರದ ನಿಸರ್ಗ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಿದಾಗ, ಸೋಂಕು ಇರುವುದು ಗೊತ್ತಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳು ಕೆ.ಆರ್.ಪುರಂ ನಲ್ಲಿರುವ ಅತಿಥಿ ಪಿ.ಜಿಯಲ್ಲಿ ವಾಸಿಸುತ್ತಿದ್ದಾರೆ.</p>.<p>ಸೋಂಕು ತಗುಲಿದ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಸಂರ್ಪಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಶ್ರೀರಂಗ ವಸತಿ ಗೃಹದಲ್ಲಿಕ್ವಾರಂಟೈನ್ ಮಾಡಿ, ಸೀಲ್ಡೌನ್ ಮಾಡಲಾಗಿದೆ. ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, ಶುಕ್ರವಾರ ವರದಿ ಬರಲಿದೆ.</p>.<p>‘ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ 19 ದೃಢಪಟ್ಟಿರುವುದರಿಂದ ಕ್ವಾರಂಟೈನ್ಮಾಡಲಾಗಿದೆ. ಈ ವಿದ್ಯಾರ್ಥಿಗಳು ಇಪ್ಪತ್ತು ದಿನಗಳ ಹಿಂದೆಯೇ ಬಂದಿದ್ದು, ಎಲ್ಲರೂ ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಪ್ರಮಾಣ ಪತ್ರ ಹಾಜರು ಪಡಿಸಿದ್ದಾರೆ.ಕೇರಳದಿಂದ ಜಿಲ್ಲೆಗೆ ಬರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ತಪಾಸಣೆಗೆ ಒಳಪಡಿಸಿ, ಪಾಸಿಟಿವ್ ಬಂದವರನ್ನು ಹೋಮ್ ಐಸೋಲೇಶನ್ನಲ್ಲಿಇರಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ತಿಳಿಸಿದರು.</p>.<p><a href="https://www.prajavani.net/india-news/over-crore-69-laks-unutilised-vaccine-doses-still-available-with-states-private-hospitals-says-854967.html" itemprop="url">ಬಳಕೆಯಾಗದ 2.69 ಕೋಟಿ ಡೋಸ್ನಷ್ಟು ಲಸಿಕೆ ರಾಜ್ಯಗಳ ಬಳಿ ಇದೆ: ಕೇಂದ್ರ ಸರ್ಕಾರ </a></p>.<p>ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಸಾಂಕ್ರಮಿಕತೆಯ ಮೂರನೇ ಅಲೆಯ ಭೀತಿಎದುರಾಗಿದೆ. ಕೇರಳದಿಂದ ವಿದ್ಯಾಭ್ಯಾಸ, ವ್ಯಾಪಾರ ವಹಿವಾಟು, ಮತ್ತಿತರ ಕಾರಣಗಳಿಂದಜಿಲ್ಲೆಗೆ ನೂರಾರು ಜನರು ಭೇಟಿ ನೀಡುತ್ತಾರೆ. ಚನ್ನರಾಯಪಟ್ಟಣಕ್ಕೆ ನಿತ್ಯವೂ ಆರು ಬಸ್ಗಳುಮುಂಬೈನಿಂದ ಬರುತ್ತಿವೆ. ಅರಸೀಕೆರೆ ರೈಲ್ವೆ ಜಂಕ್ಷನ್ಗೆ ಮುಂಬೈನಿಂದ ರೈಲುಗೆ ಬರುತ್ತವೆ.ಹಾಗಾಗಿ ಜಿಲ್ಲೆಯಲ್ಲಿ ಮೂರನೇ ಅಲೆ ಭೀತಿ ಹುಟ್ಟಿಸಿದೆ.</p>.<p>‘ಹೋಮ್ ಸ್ಟೇ ಮತ್ತು ರೆಸಾರ್ಟ್ಗಳಿಗೆ ಆಗಮಿಸುವ ಅತಿಥಿಗಳು 73 ಗಂಟೆ ಮುಂಚಿತವಾಗಿಪರೀಕ್ಷೆಗೆ ಒಳಪಟ್ಟ ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಇರುವ ಪ್ರಮಾಣ ಪತ್ರವನ್ನುಹಾಜರುಪಡಿಸಬೇಕು. ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು ರೈಲ್ವೆ ಮತ್ತು ಬಸ್ನಿಲ್ದಾಣಗಳಿಗೆ ಹೊರ ರಾಜ್ಯಗಳಿಂದ ಬರುರವ ಪ್ರಯಾಣಿಕರನ್ನು ಗುರುತಿಸಿ ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ ಹಾಗೂ ಅಂತಹ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುವುದು’ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.</p>.<p><a href="https://www.prajavani.net/world-news/delta-variant-now-reported-in-135-countries-global-coronavirus-cases-could-exceed-200-million-by-854968.html" itemprop="url">ಕೋವಿಡ್ 19: 135 ದೇಶಗಳಲ್ಲಿ ವ್ಯಾಪಿಸಿರುವ ಡೆಲ್ಟಾ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>