ಸಿಪಿಐ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಡಿ. ರಾಜಾ, ರಾಜ್ಯಸಭಾ ಸದಸ್ಯ ಕಾಂ.ವಿನಯ್ ವಿಶ್ವಂ ಹಾಗೂ ಕೇರಳ ಕಂದಾಯ ಸಚಿವ ಕಾ.ಕೆ. ರಾಜನ್ ಭಾಗವಹಿಸಲಿದ್ದಾರೆ. ರಾಜ್ಯ, ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸ್ಥಳಗಳಿಂದ ಐದು ಜಾಥಾಗಳು ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆ ದಲಿತ ಹಾಗೂ ಆದಿವಾಸಿ ಜನರ ಶ್ರೇಯೋಭಿವೃದ್ಧಿಗೆ ಪೂರಕವಾದ ಬೇಡಿಕೆ ಹೊತ್ತು ಸಮ್ಮೇಳನ ಸ್ಥಳಕ್ಕೆ ಆಗಮಿಸಲಿವೆ ಎಂದು ವಿವರಿಸಿದರು.