ಹಾಸನ: ನಗರದ ಆರ್.ಸಿ. ರಸ್ತೆಯಲ್ಲಿರುವ ಸಿಎಸ್ಐ ವೆಸ್ಲಿ ದೇವಾಲಯದ 147ನೇ ವರ್ಷದ ಸಭಾ ಸ್ಥಾಪನ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು.
ಸಭಾ ಪಾಲನಾ ಸಮಿತಿ ಖಜಾಂಚಿ ಅಬ್ರಹಾಂ ವೀರಮೂರ್ತಿ ಹಾಗೂ ಸಭೆಯ ಸದಸ್ಯೆ ಗೀತಾ ಕಿರಣ್ ದಾಸ್ ಮಾತನಾಡಿ, ಕೇವಲ 10 ಕುಟುಂಬದೊಂದಿಗೆ ಪ್ರಾರಂಭವಾದ ನಮ್ಮ ಸಭೆ, ಇಂದು ಸಾವಿರಾರು ಸಂಖ್ಯೆಯಲ್ಲಿ ಸದಸ್ಯರು ಇರುವುದು ಸಂತೋಷದ ವಿಚಾರ ಎಂದು ತಿಳಿಸಿದರು
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ ಬಿಷಪ್ ರೆ.ಹೇಮಚಂದ್ರ ಕುಮಾರ್, ಸಂದೇಶ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಭೆಯ 23 ಸದಸ್ಯರು ಹಾಗೂ ಬಿಷಪ್ ಅವರನ್ನು ಗೌರವಿಸಲಾಯಿತು.
ಸಿಎಸ್ಐ ವೆಸ್ಲಿ ಸಭೆಯ ಸಭಾಪಾಲಕ ರೆ. ವಿನೀತ್ ಸ್ವರೂಪ್, ಕಾರ್ಯದರ್ಶಿ ಸಜ್ಜನ್ ರಾಜ್, ಸಭಾ ಪಾಲನಾ ಸಮಿತಿಯ ಸದಸ್ಯರು ಹಾಗೂ ಮಹಿಳಾ ಅನ್ಯೋನ್ಯ ಸಂಘದ ಸದಸ್ಯರು, ಯುವಜನರ ಸಂಘದ ಸದಸ್ಯರು ಹಾಜರಿದ್ದರು.