ಹೊಳೆನರಸೀಪುರ ತಾಲ್ಲೂಕಿನ ಹಾಸನ ಮೈಸೂರು ರಸ್ತೆಯ ಹಂಗರಹಳ್ಳಿ ಸಮೀಪ ಇತ್ತೀಚೆಗೆ ನಿರ್ಮಾಣಗೊಂಡ ರೈಲ್ವೆ ಮೇತ್ಸೇತುವೆ ರಸ್ತೆಯಲ್ಲಿದೊಡ್ಡ ದೊಡ್ಡ ಹತ್ತಾರು ಗುಂಡಿಗಳು ಬಿದ್ದಿದ್ದು ಲಾರಿಗಳ ಗುಂಡಿಗೆ ಇಳಿದಾಗ ಆಕ್ಸಲ್ ತುಂಡಾಗಿ ಚಾಲಕರು ತೊಂದರೆ ಅನುಭವಿಸಿದ್ದಾರೆ. ಮಳೆ ಬಂದಾಗಲಂತೂ ಸಾಕಷ್ಟು ನೀರು ನಿಲ್ಲುವುದರಿಂದ ಗುಂಡಿಯ ಆಳ ಗೊತ್ತಾಗದೆ ಆಗ ಅಪಘಾತಗಳು ಆಗುವುದು ಹೆಚ್ಚು ಅನ್ನುತ್ತಾರೆ ಹಂಗರಹಳ್ಳಿ ಗ್ರಾಮಸ್ಥರು.