<p><strong>ಹಾಸನ</strong>: ನಗರದ ಬಿ.ಎಂ. ರಸ್ತೆಯಲ್ಲಿನ ಆಡುವಳ್ಳಿ ಗ್ರಾಮದ ಆದಿದೇವತೆ ಉಡುಸಲಮ್ಮ (ಗಂಗಾಪರಮೇಶ್ವರಿ), ಮಾರಿಕಾಂಬ (ಉಡುಸಲಮ್ಮ), ವೀರಭದ್ರೇಶ್ವರ, ಕರಿಬೀರೇಶ್ವರ ಹಾಗೂ ಶನಿದೇವರ ದೇವಾಲಯದಲ್ಲಿ 48ನೇ ವರ್ಷದ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.</p>.<p>ಜಾತ್ರಾ ಆಚರಣಾ ಸಮಿತಿ ಅಧ್ಯಕ್ಷ ಅಶೋಕ್ ಮಾತನಾಡಿ, ‘ಬುಧವಾರ ಬೆಳಿಗ್ಗೆ ಮಾರಿಕಾಂಬೆಯ ಮೂಲಸ್ಥಾನದಲ್ಲಿ ಅಭಿಷೇಕ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಎಚ್.ಡಿ. ದೇವರಾಜು ಅವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಸಹೋದರರು ಆಯೋಜಿಸಿದ್ದರು ಎಂದು ತಿಳಿಸಿದರು.</p>.<p>ಸಂಜೆ 6ಕ್ಕೆ ದೇವಿಗೆರೆಯಿಂದ ಗಂಗಾಕಳಸದೊಂದಿಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಾಲಯಕ್ಕೆ ಆಗಮನವಾಗಿದ್ದು, ಗುರುವಾರ ಬೆಳಿಗ್ಗೆ 5ರಿಂದ 7.30ರವರೆಗೆ ದುರ್ಗಾ ಹೋಮ. ಬೆಳಿಗ್ಗೆ 9 ಗಂಟೆಗೆ ಗಂಗಾಮತಸ್ಥರ ಬೀದಿಯಿಂದ ಗಂಗಾಮತಸ್ಥರು, ಆಡುವಳ್ಳಿ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ತಂಬಿಟ್ಟಿನ ಆರತಿ ಮತ್ತು ನಿಂಬೆಹಣ್ಣಿನ ದೀಪದೊಂದಿಗೆ ಅಮ್ಮನವರ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು ಎಂದರು.</p>.<p>ಜ.16ರಂದು ರಾತ್ರಿ 8ಕ್ಕೆ ರಥೋತ್ಸವದೊಂದಿಗೆ ಅಮ್ಮನವರ ಭವ್ಯ ಮೆರವಣಿಗೆ ನಡೆಯಲಿದ್ದು, ಕೀಲು ಕುಣಿತ, ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತ ಇರಲಿದೆ. ಈ ಉತ್ಸವವನ್ನು ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಉದ್ಘಾಟಿಸಲಿದ್ದಾರೆ.</p>.<p>ಜ.17ರಂದು ಸಂಜೆ 7 ಗಂಟೆಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಮ್ಮ ದೇವಸ್ಥಾನದ ಸುತ್ತಲು ಬೇವಿನ ಉಡಿಗೆ ಉತ್ಸವ ನಡೆಯಲಿದೆ. ಜ.20ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಸಂತ ಓಕಳಿ ಕಾರ್ಯಕ್ರಮ ಜರುಗಲಿದೆ. ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತ ಮಂಡಳಿ ವಿನಂತಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ನಗರದ ಬಿ.ಎಂ. ರಸ್ತೆಯಲ್ಲಿನ ಆಡುವಳ್ಳಿ ಗ್ರಾಮದ ಆದಿದೇವತೆ ಉಡುಸಲಮ್ಮ (ಗಂಗಾಪರಮೇಶ್ವರಿ), ಮಾರಿಕಾಂಬ (ಉಡುಸಲಮ್ಮ), ವೀರಭದ್ರೇಶ್ವರ, ಕರಿಬೀರೇಶ್ವರ ಹಾಗೂ ಶನಿದೇವರ ದೇವಾಲಯದಲ್ಲಿ 48ನೇ ವರ್ಷದ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.</p>.<p>ಜಾತ್ರಾ ಆಚರಣಾ ಸಮಿತಿ ಅಧ್ಯಕ್ಷ ಅಶೋಕ್ ಮಾತನಾಡಿ, ‘ಬುಧವಾರ ಬೆಳಿಗ್ಗೆ ಮಾರಿಕಾಂಬೆಯ ಮೂಲಸ್ಥಾನದಲ್ಲಿ ಅಭಿಷೇಕ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಎಚ್.ಡಿ. ದೇವರಾಜು ಅವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಸಹೋದರರು ಆಯೋಜಿಸಿದ್ದರು ಎಂದು ತಿಳಿಸಿದರು.</p>.<p>ಸಂಜೆ 6ಕ್ಕೆ ದೇವಿಗೆರೆಯಿಂದ ಗಂಗಾಕಳಸದೊಂದಿಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಾಲಯಕ್ಕೆ ಆಗಮನವಾಗಿದ್ದು, ಗುರುವಾರ ಬೆಳಿಗ್ಗೆ 5ರಿಂದ 7.30ರವರೆಗೆ ದುರ್ಗಾ ಹೋಮ. ಬೆಳಿಗ್ಗೆ 9 ಗಂಟೆಗೆ ಗಂಗಾಮತಸ್ಥರ ಬೀದಿಯಿಂದ ಗಂಗಾಮತಸ್ಥರು, ಆಡುವಳ್ಳಿ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ತಂಬಿಟ್ಟಿನ ಆರತಿ ಮತ್ತು ನಿಂಬೆಹಣ್ಣಿನ ದೀಪದೊಂದಿಗೆ ಅಮ್ಮನವರ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು ಎಂದರು.</p>.<p>ಜ.16ರಂದು ರಾತ್ರಿ 8ಕ್ಕೆ ರಥೋತ್ಸವದೊಂದಿಗೆ ಅಮ್ಮನವರ ಭವ್ಯ ಮೆರವಣಿಗೆ ನಡೆಯಲಿದ್ದು, ಕೀಲು ಕುಣಿತ, ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತ ಇರಲಿದೆ. ಈ ಉತ್ಸವವನ್ನು ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಉದ್ಘಾಟಿಸಲಿದ್ದಾರೆ.</p>.<p>ಜ.17ರಂದು ಸಂಜೆ 7 ಗಂಟೆಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಮ್ಮ ದೇವಸ್ಥಾನದ ಸುತ್ತಲು ಬೇವಿನ ಉಡಿಗೆ ಉತ್ಸವ ನಡೆಯಲಿದೆ. ಜ.20ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಸಂತ ಓಕಳಿ ಕಾರ್ಯಕ್ರಮ ಜರುಗಲಿದೆ. ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತ ಮಂಡಳಿ ವಿನಂತಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>