ಗೃಹಲಕ್ಷ್ಮಿ ಯೋಜನೆಯ ಹಣ ನಮಗೆ ಬೇಡ. ಶುದ್ಧ ಕುಡಿಯುವ ನೀರು ಪೂರೈಸಿ. ಪಂಚಾಯಿತಿಗೆ ದೂರು ನೀಡಿದರೂ ಸ್ಪಂದನೆ ಇಲ್ಲ. ಅನ್ನವಿಲ್ಲದಿದ್ದರೂ ಬದುಕಬಹುದು. ಶುದ್ಧ ಕುಡಿಯುವ ನೀರು ಅವಶ್ಯಕ.
ಸುಭದ್ರ, ಗ್ರಾಮದ ಮಹಿಳೆ
ಜೆಜೆಎಂ ಯೋಜನೆಯಡಿ ಪೂರೈಕೆ ಆಗುತ್ತಿರುವ ನೀರು ಕಲುಷಿತವಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ.