ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್, ತಹಶೀಲ್ದಾರ್ ಮೇಘನಾ, ಉಪವಿಬಾಗಾಧಿಕಾರಿ ನವೀನ್ ಭಟ್, ದೇವಾಲಯದ ಆಡಳಿತಾಧಿಕಾರಿ ಎಚ್.ಎಲ್.ನಾಗರಾಜ್ ಬಾಗಿಲು ಹಾಕುವಾಗ ಹಾಜರಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳಿಂದ ಬೀಗ ಹಾಕಿ ಸೀಲ್ ಒತ್ತಲಾಯಿತು. ಕಡೆ ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ದೇವಿ ದರ್ಶನಕ್ಕೆ ಆಗ್ರಹಿಸಿದ ಕಾರಣ ಅವರಿಗೂ ಅವಕಾಶ ಕಲ್ಪಿಸಲಾಯಿತು.