<p><strong>ಹಾಸನ</strong>: ಜಿಲ್ಲೆಯ ಜೀವನದಿ ಹೇಮಾವತಿ ಹಾಗೂ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ವರ್ಷದಲ್ಲಿ<br />ಎರಡನೇ ಬಾರಿಗೆ ಭರ್ತಿಯಾಗಿದೆ.</p>.<p>ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು ಭಾಗದಲ್ಲಿ ಮುಂಗಾರು ಬಿರುಸುಗೊಂಡ<br />ಪರಿಣಾಮ ನೀರಿನ ಒಳ ಹರಿವು ಏರಿಕೆಯಾಗಿ ಭರ್ತಿ ಹಂತದಲ್ಲೇ ಇದೆ.</p>.<p>ಕಳೆದ ಆ.17ರಂದು ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದರಿಂದ 18 ಸಾವಿರ ಕ್ಯುಸೆಕ್<br />ನೀರನ್ನು ನದಿಗೆ ಬಿಡಲಾಗಿತ್ತು. ಆ.27 ರ ವರೆಗೂ ನೀರಿನ ಮಟ್ಟ 2920 ಅಡಿಯಲ್ಲೇ ಇತ್ತು. ಹೆಚ್ಚು ಕಡಿಮೆ ಎರಡು<br />ತಿಂಗಳು ಒಡಲು ತುಂಬಿಕೊಂಡೇ ಇತ್ತು. ಜಲಾಶಯದ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಅಧಿಕಾರಿಗಳೇ<br />ಹೇಳಿದ್ದರು.</p>.<p>ನಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಒಳ ಹರಿವು ಕ್ಷೀಣಿಸುತ್ತಾ ಬಂದಿತ್ತು. ಸೆ. 20ರ ವೇಳೆಗೆ ನೀರಿನ ಮಟ್ಟ 2918.60 ಅಡಿಗೆ ಇಳಿದಿತ್ತು.</p>.<p>ಈ ಬಾರಿಯೂ ಮಲೆನಾಡು ಹಾಗೂ ಮೂಡಿಗೆರೆ ಭಾಗದಲ್ಲಿ ಜೋರು ಮಳೆಯಿಂದಾಗಿ ಆಗಸ್ಟ್ 2ನೇ ವಾರದಲ್ಲೇ<br />ಭರ್ತಿಯಾಗಿತ್ತು. ಅಲ್ಲಿಂದ ಈವರೆಗೂ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಹಂತದಲ್ಲೇ ಇದೆ.<br />ಇದರಿಂದಾಗಿ ಭವಿಷ್ಯದಲ್ಲಿ ನೀರಾವರಿಗೆ ಮತ್ತು ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ತಲೆ<br />ಉಂಟಾಗುವುದಿಲ್ಲ.</p>.<p>ಹೇಮಾವತಿ ಜಲಾಶಯ ಭರ್ತಿ ಆಗುವ ಮುನ್ಸೂಚನೆ ಸಿಕ್ಕ ತಕ್ಷಣವೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ<br />ಮಾಡಲು ಶುರುವಾಯಿತು. ಸೆ. 4ರಂದು ಹೇಮಾವತಿ ಬಲ ದಂಡೆ ನಾಲೆಗೆ ನೀರು ಬಿಡುಗಡೆ ಮಾಡಿದ ಅಣೆಕಟ್ಟು<br />ವಿಭಾಗದ ಮೂರು ಜಿಲ್ಲೆಗಳ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಎಡದಂಡೆ ನಾಲೆಗೆ ಆ. 8ರಿಂದ ನೀರು<br />ಬಿಡುಗಡೆ ಆರಂಭಿಸಿತು.</p>.<p>ಸದ್ಯ ಎಡದಂಡೆ ನಾಲೆಯಲ್ಲಿ ನಿತ್ಯ 3100 ಕ್ಯುಸೆಕ್, ಬಲದಂಡೆ ನಾಲೆಯಲ್ಲಿ 300 ಕ್ಯುಸೆಕ್ ಹಾಗೂ ಬಲ ಮೇಲ್ದಂಡೆ ನಾಲೇಯಲ್ಲಿ 600 ಕ್ಯುಸೆಕ್ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತಿದೆ. ಡಿ.31ರವರೆಗೂ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಬೆಳೆಗೆ ನೀರು ಬಿಡುಗಡೆಗೆ ನೀರಾವರಿ ಸಲಹಾ<br />ಸಮಿತಿಯಲ್ಲಿ ನಿರ್ಧರಿಸಲಾಗಿದೆ.</p>.<p>ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದೆ.<br />ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಸುರಿದ<br />ಮಳೆಗೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂತು.</p>.<p>3.603 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಐದು ಕ್ರಸ್ಟ್ ಗೇಟ್ ಮೂಲಕ 74<br />ಸಾವಿರ ಕ್ಯುಸೆಕ್ ನೀರನ್ನು ಏಕಕಾಲದಲ್ಲಿ ಹರಿಸಬಹುದು. ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ<br />33 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು.</p>.<p>ಕಳೆದ ಆಗಸ್ಟ್ 6 ರಂದು ಜಲಾಶಯ ಭರ್ತಿಯಾಗಿದ್ದರಿಂದ 5 ಸಾವಿರ ಕ್ಯುಸೆಕ್ ನೀರನ್ನು ಹೊರ ಹರಿಸಲಾಗಿತ್ತು. ಎರಡನೇ ಬಾರಿಗೆ ಸೆ.2 ರಂದು ನೀರನ್ನು ಬಿಡಲಾಗಿತ್ತು. ಮೂರನೇ ಬಾರಿಗೆ ಸೆ. 20ರಂದು ಜಲಾಶಯ ಭರ್ತಿಯಾಗುವ ಮೂಲಕ ಇತಿಹಾಸದಲ್ಲಿ ಒಂದೇ ವರ್ಷ ಮೂರು ತುಂಬಿದ ಹೆಗ್ಗಳಿಕೆ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಜಿಲ್ಲೆಯ ಜೀವನದಿ ಹೇಮಾವತಿ ಹಾಗೂ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ವರ್ಷದಲ್ಲಿ<br />ಎರಡನೇ ಬಾರಿಗೆ ಭರ್ತಿಯಾಗಿದೆ.</p>.<p>ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು ಭಾಗದಲ್ಲಿ ಮುಂಗಾರು ಬಿರುಸುಗೊಂಡ<br />ಪರಿಣಾಮ ನೀರಿನ ಒಳ ಹರಿವು ಏರಿಕೆಯಾಗಿ ಭರ್ತಿ ಹಂತದಲ್ಲೇ ಇದೆ.</p>.<p>ಕಳೆದ ಆ.17ರಂದು ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದರಿಂದ 18 ಸಾವಿರ ಕ್ಯುಸೆಕ್<br />ನೀರನ್ನು ನದಿಗೆ ಬಿಡಲಾಗಿತ್ತು. ಆ.27 ರ ವರೆಗೂ ನೀರಿನ ಮಟ್ಟ 2920 ಅಡಿಯಲ್ಲೇ ಇತ್ತು. ಹೆಚ್ಚು ಕಡಿಮೆ ಎರಡು<br />ತಿಂಗಳು ಒಡಲು ತುಂಬಿಕೊಂಡೇ ಇತ್ತು. ಜಲಾಶಯದ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಅಧಿಕಾರಿಗಳೇ<br />ಹೇಳಿದ್ದರು.</p>.<p>ನಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಒಳ ಹರಿವು ಕ್ಷೀಣಿಸುತ್ತಾ ಬಂದಿತ್ತು. ಸೆ. 20ರ ವೇಳೆಗೆ ನೀರಿನ ಮಟ್ಟ 2918.60 ಅಡಿಗೆ ಇಳಿದಿತ್ತು.</p>.<p>ಈ ಬಾರಿಯೂ ಮಲೆನಾಡು ಹಾಗೂ ಮೂಡಿಗೆರೆ ಭಾಗದಲ್ಲಿ ಜೋರು ಮಳೆಯಿಂದಾಗಿ ಆಗಸ್ಟ್ 2ನೇ ವಾರದಲ್ಲೇ<br />ಭರ್ತಿಯಾಗಿತ್ತು. ಅಲ್ಲಿಂದ ಈವರೆಗೂ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಹಂತದಲ್ಲೇ ಇದೆ.<br />ಇದರಿಂದಾಗಿ ಭವಿಷ್ಯದಲ್ಲಿ ನೀರಾವರಿಗೆ ಮತ್ತು ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ತಲೆ<br />ಉಂಟಾಗುವುದಿಲ್ಲ.</p>.<p>ಹೇಮಾವತಿ ಜಲಾಶಯ ಭರ್ತಿ ಆಗುವ ಮುನ್ಸೂಚನೆ ಸಿಕ್ಕ ತಕ್ಷಣವೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ<br />ಮಾಡಲು ಶುರುವಾಯಿತು. ಸೆ. 4ರಂದು ಹೇಮಾವತಿ ಬಲ ದಂಡೆ ನಾಲೆಗೆ ನೀರು ಬಿಡುಗಡೆ ಮಾಡಿದ ಅಣೆಕಟ್ಟು<br />ವಿಭಾಗದ ಮೂರು ಜಿಲ್ಲೆಗಳ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಎಡದಂಡೆ ನಾಲೆಗೆ ಆ. 8ರಿಂದ ನೀರು<br />ಬಿಡುಗಡೆ ಆರಂಭಿಸಿತು.</p>.<p>ಸದ್ಯ ಎಡದಂಡೆ ನಾಲೆಯಲ್ಲಿ ನಿತ್ಯ 3100 ಕ್ಯುಸೆಕ್, ಬಲದಂಡೆ ನಾಲೆಯಲ್ಲಿ 300 ಕ್ಯುಸೆಕ್ ಹಾಗೂ ಬಲ ಮೇಲ್ದಂಡೆ ನಾಲೇಯಲ್ಲಿ 600 ಕ್ಯುಸೆಕ್ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತಿದೆ. ಡಿ.31ರವರೆಗೂ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಬೆಳೆಗೆ ನೀರು ಬಿಡುಗಡೆಗೆ ನೀರಾವರಿ ಸಲಹಾ<br />ಸಮಿತಿಯಲ್ಲಿ ನಿರ್ಧರಿಸಲಾಗಿದೆ.</p>.<p>ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದೆ.<br />ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಸುರಿದ<br />ಮಳೆಗೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂತು.</p>.<p>3.603 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಐದು ಕ್ರಸ್ಟ್ ಗೇಟ್ ಮೂಲಕ 74<br />ಸಾವಿರ ಕ್ಯುಸೆಕ್ ನೀರನ್ನು ಏಕಕಾಲದಲ್ಲಿ ಹರಿಸಬಹುದು. ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ<br />33 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು.</p>.<p>ಕಳೆದ ಆಗಸ್ಟ್ 6 ರಂದು ಜಲಾಶಯ ಭರ್ತಿಯಾಗಿದ್ದರಿಂದ 5 ಸಾವಿರ ಕ್ಯುಸೆಕ್ ನೀರನ್ನು ಹೊರ ಹರಿಸಲಾಗಿತ್ತು. ಎರಡನೇ ಬಾರಿಗೆ ಸೆ.2 ರಂದು ನೀರನ್ನು ಬಿಡಲಾಗಿತ್ತು. ಮೂರನೇ ಬಾರಿಗೆ ಸೆ. 20ರಂದು ಜಲಾಶಯ ಭರ್ತಿಯಾಗುವ ಮೂಲಕ ಇತಿಹಾಸದಲ್ಲಿ ಒಂದೇ ವರ್ಷ ಮೂರು ತುಂಬಿದ ಹೆಗ್ಗಳಿಕೆ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>