ಬಿಟ್ಟಗೌಡನಹಳ್ಳಿ ಗ್ರಾಮದ ರಮೇಶ್, ಪ್ರಕಾಶ್ ಮತ್ತು ಬಸವರಾಜ್ ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಪರ ಮತ ಕೇಳುತ್ತಿದ್ದಾಗ ಚಂದನ(ಶಂಕರ), ಬಸವರಾಜ್ ಹಾಗೂ ಅಭಿಲಾಷ್ ಎಂಬುವರು ‘ಇದು ಜೆಡಿಎಸ್ ಭದ್ರಕೋಟೆ ಇಲ್ಲೇಕೆ ಪ್ರಚಾರ ಮಾಡುತ್ತಿದ್ದೀರಿ’ ಎಂದು ತಡೆದಿದ್ದಾರೆ. ಎರಡೂ ಗುಂಪುಗಳ ನಡುವೆ ಜಗಳ ಆಗುವಾಗ ತಳ್ಳಾಟದಲ್ಲಿ ಬಸವರಾಜ್ ಚರಂಡಿಗೆ ಬಿದ್ದು, ಸೊಂಟಕ್ಕೆ ಪೆಟ್ಟು ಬಿದ್ದಿದೆ. ಅವರ ಹೇಳಿಕೆ ಪಡೆದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.