ಹೆತ್ತೂರು: ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಗೆ 12 ಜನರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಗ್ರಾಮದ ತೋಟದ ಮಾಲೀಕ ಚಂದ್ರೇಗೌಡ, ಅಮೃತೇಶ್, ಕಾರ್ಮಿಕರಾದ ಮಂಜುಳಾ, ಗೀತಾ, ರಾಜೇಶ್, ರತ್ನ, ಕುಮಾರ, ಅಕ್ಕಮ್ಮ ಸೇರಿದಂತೆ ಹಲವರು ಜಮೀನಿನಲ್ಲಿ ಕಾಫಿ ಹಣ್ಣು ಕೊಯ್ಲು ಮಾಡುತ್ತಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಗಾಯಗೊಂಡಿದ್ದಾರೆ.
ಇವರಲ್ಲಿ 6 ಜನರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ವನಗೂರು ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಧುಸೂದನ್ ಅವರು ಹೇಳಿದ್ದಾರೆ.