‘ನನಗೆ ಹೆಚ್.ಡಿ.ದೇವೇಗೌಡರೇ ದೇವರು, ಜೆಡಿಎಸ್ ಪಕ್ಷವೇ ಆಶ್ರಯ, ಎಚ್.ಡಿ. ರೇವಣ್ಣ, ಎಚ್.ಡಿ.ಕುಮಾರಣ್ಣ ರಾಜಕೀಯ ಆಶ್ರಯದಾತರು. ಹಾಗಾಗಿ ನಾನು ಬೇರೆ ಯಾವ ಪಕ್ಷದ ಸಂಪರ್ಕದಲ್ಲಿರುವೆ ಎಂಬುದು ಆಧಾರರಹಿತ ಮತ್ತು ನನಗೆ ತೊಂದರೆ ಕೊಡುವ ಪ್ರಯತ್ನಗಳು ಎಂದೇ ಭಾವಿಸುವೆ. ಹಾಗಾಗಿ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸಂಪರ್ಕದಲ್ಲಿರುವೆ ಎಂಬ ವರದಿಗಳನ್ನು ಅಲ್ಲಗಳೆಯುತ್ತೇನೆ’ ಎಂದು ಹೇಳಿದ್ದಾರೆ.