ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ ಮಾತನಾಡಿ, ‘ಸ್ಫೋಟಕ ಸಾಗಣೆ ವಾಹನದ ಚಾಲಕ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ದಾರೆ. ಘಟನೆ ನಡೆದಾಗ ಲಾರಿ ಚಾಲಕ, ಭರತ್,ಗೋದಾಮು ಮೇಲ್ವಿಚಾರಕ ರವಿಕುಮಾರ್, ನಟರಾಜ್ ಮತ್ತು ಸಂಪತ್ ಇದ್ದರು. ಲಾರಿ ಬಲಭಾಗದಲ್ಲಿದ್ದ ಚಾಲಕ ಮತ್ತು ಭರತ್ಗೆ ಹಾನಿ ಆಗಿಲ್ಲ. ಆದರೆ ಎಡಭಾಗದಲ್ಲಿದ್ದ ಸಂಪತ್, ರವಿಕುಮಾರ್ ಮೃತಪಟ್ಟಿದ್ದಾರೆ. ನಟರಾಜು ಗಾಯಗೊಂಡಿದ್ದಾರೆ. ಎರಡು ದ್ವಿಚಕ್ರ ವಾಹನ ಕರಕಲಾಗಿದೆ ಎಂದು ಮಾಹಿತಿ ನೀಡಿದರು.