ಹಾಸನ: ಅರಸೀಕೆರೆ ತಾಲೂಕುದೇವರಸನಹಳ್ಳಿ ಬಳಿತಡರಾತ್ರಿ 1.30 ರಲ್ಲಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ಹಾಗೂ ಮಾರುತಿ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟು, ನಾಲ್ಕು ಮಂದಿಗೆ ಗಾಯಗೊಂಡಿದ್ದಾರೆ.
ಮುಜೀಬಾ(53) ಮಹಮದ್ ಸಾಧಿಖ್(22), ಮುಷ್ಕಾನ್(19) ಮೃತರು. ಮೃತಪಟ್ಟವರು ತಾಯಿ, ಮಗಳು ಮತ್ತು ಪುತ್ರ
ತುಮಕೂರು ಜಿಲ್ಲೆ ಮಧುಗಿರಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ದುರಂತ. ಗಾಯಾಳುಗಳಾದ ಶಾಲಿನ್ ಭಾನು, ಇಮ್ರಾನ್ ಅಹಮದ್, ಶಾಲಿನ್ ತಾಜ್, ಮೊಹಮ್ಮದ್ ಶಾಲಿನ್ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ.