ಮಂಗಳವಾರ ಸಂಜೆ ಆರೋಪಿಗಳು ಮತ್ತು ಆನಂದನ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ರಾತ್ರಿ 10.45 ರಲ್ಲಿ ಅನಂದ್ ತನ್ನ ಸ್ನೇಹಿತ ರವಿ ಜೊತೆ ಬೈಕ್ನಲ್ಲಿ ಚನ್ನರಾಯಪಟ್ಟಣದಿಂದ ಊರಿಗೆ ತೆರಳುತ್ತಿದ್ದನು. ಕಾಳೇನಹಳ್ಳಿಯ ಹತ್ತಿರ ಇರುವ ಮಂಚಿಕಟ್ಟೆ ಬಳಿ ಆರೋಪಿಗಳು ಆನಂದ್ ಮತ್ತು ರವಿ ಅವರನ್ನು ತಡೆದಿದ್ದಾರೆ. ನಮ್ಮ ಜೊತೆ ಜಗಳ ಮಾಡುತ್ತೀಯಾ ಎಂದು ಆನಂದನನ್ನು ಅವಾಚ್ಯ ಪದಗಳಿಂದ ನಿಂದಿಸಿ ಚಾಕುವಿನಿಂದ ಕುತ್ತಿಗೆ, ಎದೆಗೆ ಚುಚ್ಚಿದ್ದಾರೆ. ಆನಂದ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.