ಭೀಮ ಆನೆ ಬಾರದಂತೆ ಕಾರ್ಯಾಚರಣೆ ನಡೆಸಿ ವಿಕ್ರಾಂತ್ ಆನೆಯನ್ನು ಹಿಡಿಯಲು ಪ್ರಯತ್ನಿಸಿದ್ದೆವು. ಆದರೆ ಭೀಮ ಬಂದಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದ್ದು ವಿಕ್ರಾಂತ್ನನ್ನು ಸೆರೆಹಿಡಿಯಲಾಗುವುದು.
ಏಡುಕೊಂಡಲ ಸಿಸಿಎಫ್
ಆನೆಗಳನ್ನು ಸೆರೆಹಿಡಿಯುವುದು ಕಷ್ಟದ ಕೆಲಸ. ಹಾಸನ ಚಿಕ್ಕಮಗಳೂರು ಕೊಡಗು ಜಿಲ್ಲೆಯ ಅರಣ್ಯ ಅಧಿಕಾರಿಗಳು ಸೇರಿ ಹೆಚ್ಚಿನ ಕಾರ್ಮಿಕರನ್ನು ಬಳಸಿ ಆನೆಗಳನ್ನು ಭದ್ರಾ ಅಭಯಾರಣ್ಯಗೆ ಓಡಿಸುವುದು ಸುಲಭ
ಅದ್ದೂರಿ ಕುಮಾರ್ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಸರ್ಕಾರ ಆನೆಧಾಮ ಮಾಡುತ್ತೇವೆ ಎಂದು ಹೇಳಿ ₹ 20 ಕೋಟಿ ಇಟ್ಟಿದೆ. ಇದರಿಂದ ಸರ್ವೆ ಮಾಡಲೂ ಸಾಧ್ಯವಿಲ್ಲ. ಹೆಚ್ಚಿನ ಹಣ ನೀಡಬೇಕು. ಪರಿಹಾರಧನವನ್ನು ₹50 ಲಕ್ಷಕ್ಕೆ ಹೆಚ್ಚಿಸುವಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ.