ಗ್ರಾಮದ ಸೋಮೇಶ್ ಬಿನ್ ನಾಗೇಗೌಡ ಎಂಬುವವರ ಜಮೀನಿನಲ್ಲಿ ಶುಂಠಿ ಮತ್ತು ಕೆಸುವಿನ ಬೆಳೆ ನಡುವೆ ಬೆಳೆದಿದ್ದ 60 ಕೆ.ಜಿ ಗಾಂಜಾ, ಪ್ರಕಾಶ್ ಬಿನ್ ನಾಗರಾಜೇಗೌಡ ಜಮೀನಿನಲ್ಲಿ ಜೋಳದ ಬೆಳೆ ನಡುವೆ ಬೆಳೆದಿದ್ದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಜಮೀನಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಬೆಳೆದಿದ್ದು, ಕಟಾವು ಮಾಡಿ ರವಾನೆ ಮಾಡಿರುವ ಮಾಹಿತಿ ದೊರೆತಿದೆ. ಗ್ರಾಮದ ದೇವರಾಜ ಎಂಬುವವರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಅವರ ಮನೆಮೇಲೆ ದಾಳಿ ನಡೆಸಿದಾಗ 550 ಗ್ರಾಂ ಒಣಗಿದ ಗಾಂಜಾ ದೊರೆತಿದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತ ಗೋಪಾಲ ಕೃಷ್ಣೇಗೌಡ ತಿಳಿಸಿದರು.