ಹಳೇಬೀಡು: ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು. ಒಂದು ಗಂಟೆಗೂ ಹೆಚ್ಚು ಮಳೆ ಸುರಿದರೂ, ಸಂಜೆ ಉಷ್ಣಾಂಶ ಹೆಚ್ಚಾಗಿತ್ತು.
ಮಾಯಗೊಂಡನಹಳ್ಳಿ, ಚಟಚಟ್ಟಿಹಳ್ಳಿ, ರಾಮನಹಳ್ಳಿ ಮೊದಲಾದ ಗ್ರಾಮಗಳ ಸುತ್ತಮುತ್ತ ಜೋರು ಮಳೆ ಸುರಿದು ಭೂಮಿ ತಂಪಾಯಿತು. ಕೆಲವು ಗ್ರಾಮಗಳಿಗೆ ಸಮೃದ್ದ ಮಳೆ ಬಿದ್ದರೆ, ಹಲವು ಗ್ರಾಮಗಳಿಗೆ ಒಂದು ಹನಿ ಮಳೆಯೂ ಬರಲಿಲ್ಲ.
ದೂರದಿಂದ ಬಂದಿದ್ದ ಪ್ರವಾಸಿಗರು ಛತ್ರಿ ಹಿಡಿದು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಕಲೆ ವಿಕ್ಷಣೆ ಮಾಡಿದರು. ಮಾರ್ಗದರ್ಶಿಗಳು ಮಳೆಯಲ್ಲಿಯೇ ಪ್ರವಾಸಿಗರಿಗೆ ಮಾಹಿತಿ ನೀಡಿದರು.