<p><strong>ಚನ್ನರಾಯಪಟ್ಟಣ</strong>: ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಸ್ಥಾಪನೆಯಾಗಿ ಎರಡು ವರ್ಷ ಸಂದ ಹಿನ್ನೆಯಲ್ಲಿ ರಾಮೋತ್ಸವದ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು.<br><br> ಗ್ರಾಮ ದೇವತೆ ವಳಗೇರಮ್ಮ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಹೊಸಕೊಪ್ಪಲು ಗ್ರಾಮದ ಶಕ್ತಿಪೀಠದ ಬಸವೇಶ್ವರ ಚೈತನ್ಯಸ್ವಾಮೀಜಿ, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಸೇರಿ ಮುಖಂಡರು ಚಾಲನೆ ನೀಡಿದರು. ಚೆಂಡೆವಾದ್ಯದ ನಾದದೊಂದಿಗೆ ಬಾಲರಾಮನಮೂರ್ತಿ ಇದ್ದ ವಾಹನ ಸಾಗಿತು.<br><br> ಬಾಗೂರುರಸ್ತೆ, ಕೋಟೆ, ಹೊಸ ಬಸ್ ನಿಲ್ದಾಣ, ನವೋದಯವೃತ್ತ, ಮೈಸೂರುರಸ್ತೆ, ಆಸ್ಪತ್ರೆ ವೃತ್ತದಲ್ಲಿ ಮೆರವಣಿಗೆ ಸಾಗಿತು. ಶ್ರವಣಬೆಳಗೊಳ ಹೋಬಳಿ ಕುಂಬೇನಹಳ್ಳಿಯ ಸಂಜೀವಿನಿ ಆಂಜನೇಯ, ನುಗ್ಗೇಹಳ್ಳಿ ಕಲ್ಯಾಣಿ ಆಂಜನೇಯಸ್ವಾಮಿ, ಚನ್ನರಾಯಪಟ್ಟಣದ ಮೇಗಲಕೇರಿ ಕಾಡಾಂಜನೇಯಸ್ವಾಮಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅದೇರೀತಿ ಹನುಮಾನ್ ಸ್ತಬ್ಧ ಚಿತ್ರ ನೋಡುಗರ ಗಮನ ಸೆಳೆಯಿತು. <br><br>ವಾಹನಗಳಲ್ಲಿ ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಸ್ವಾಮೀ ವಿವೇಕಾನಂದ, ಶಿವಾಜಿ, ಕೆಂಪೇಗೌಡ, ಕೇಶವ ಬಲಿರಾಂ ಹೆಡಗೇವಾರ್.ಎಂ.ಎಸ್. ಗೊಳ್ವಾವಲ್ಕರ್, ಕಿತ್ತೂರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ರಾಜಗುರು, ಸುಖದೇವ್, ವೀರಸಾವರ್ಕರ್, ಸುಭಾಷ್ ಚಂದ್ರ ಬೋಸ್ , ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಜನಪದ ಕಲಾತಂಡಗಳಾದ ಕೋಲಾಟ, ತಮಟೆವಾದ್ಯ, ವೀರಗಾಸೆ , ಕಲಾತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಕೇಸರಿ ಬಂಟಿಂಗ್ಸ್ ಅಳವಡಿಸಲಾಗಿತ್ತು, ಭಾಗವಹಿಸಿದ್ದವರು ಕೇಸರಿ ಶಾಲು ಧರಿಸಿದ್ದರು. ಹಿಂದೂಪರ ಸಂಘಟನೆಗಳ ಮುಖಂಡರಾದ ಧರಣೇಶ್, ರವಿ, ರಾಘು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ</strong>: ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಸ್ಥಾಪನೆಯಾಗಿ ಎರಡು ವರ್ಷ ಸಂದ ಹಿನ್ನೆಯಲ್ಲಿ ರಾಮೋತ್ಸವದ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು.<br><br> ಗ್ರಾಮ ದೇವತೆ ವಳಗೇರಮ್ಮ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಹೊಸಕೊಪ್ಪಲು ಗ್ರಾಮದ ಶಕ್ತಿಪೀಠದ ಬಸವೇಶ್ವರ ಚೈತನ್ಯಸ್ವಾಮೀಜಿ, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಸೇರಿ ಮುಖಂಡರು ಚಾಲನೆ ನೀಡಿದರು. ಚೆಂಡೆವಾದ್ಯದ ನಾದದೊಂದಿಗೆ ಬಾಲರಾಮನಮೂರ್ತಿ ಇದ್ದ ವಾಹನ ಸಾಗಿತು.<br><br> ಬಾಗೂರುರಸ್ತೆ, ಕೋಟೆ, ಹೊಸ ಬಸ್ ನಿಲ್ದಾಣ, ನವೋದಯವೃತ್ತ, ಮೈಸೂರುರಸ್ತೆ, ಆಸ್ಪತ್ರೆ ವೃತ್ತದಲ್ಲಿ ಮೆರವಣಿಗೆ ಸಾಗಿತು. ಶ್ರವಣಬೆಳಗೊಳ ಹೋಬಳಿ ಕುಂಬೇನಹಳ್ಳಿಯ ಸಂಜೀವಿನಿ ಆಂಜನೇಯ, ನುಗ್ಗೇಹಳ್ಳಿ ಕಲ್ಯಾಣಿ ಆಂಜನೇಯಸ್ವಾಮಿ, ಚನ್ನರಾಯಪಟ್ಟಣದ ಮೇಗಲಕೇರಿ ಕಾಡಾಂಜನೇಯಸ್ವಾಮಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅದೇರೀತಿ ಹನುಮಾನ್ ಸ್ತಬ್ಧ ಚಿತ್ರ ನೋಡುಗರ ಗಮನ ಸೆಳೆಯಿತು. <br><br>ವಾಹನಗಳಲ್ಲಿ ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಸ್ವಾಮೀ ವಿವೇಕಾನಂದ, ಶಿವಾಜಿ, ಕೆಂಪೇಗೌಡ, ಕೇಶವ ಬಲಿರಾಂ ಹೆಡಗೇವಾರ್.ಎಂ.ಎಸ್. ಗೊಳ್ವಾವಲ್ಕರ್, ಕಿತ್ತೂರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ರಾಜಗುರು, ಸುಖದೇವ್, ವೀರಸಾವರ್ಕರ್, ಸುಭಾಷ್ ಚಂದ್ರ ಬೋಸ್ , ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಜನಪದ ಕಲಾತಂಡಗಳಾದ ಕೋಲಾಟ, ತಮಟೆವಾದ್ಯ, ವೀರಗಾಸೆ , ಕಲಾತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಕೇಸರಿ ಬಂಟಿಂಗ್ಸ್ ಅಳವಡಿಸಲಾಗಿತ್ತು, ಭಾಗವಹಿಸಿದ್ದವರು ಕೇಸರಿ ಶಾಲು ಧರಿಸಿದ್ದರು. ಹಿಂದೂಪರ ಸಂಘಟನೆಗಳ ಮುಖಂಡರಾದ ಧರಣೇಶ್, ರವಿ, ರಾಘು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>