ಬೆಳಿಗ್ಗೆ 8.30ರಿಂದ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ನಡೆಯಿತು. ಪುಷ್ಪಾಲಂಕೃತ ರಥ ಮಧ್ಯಾಹ್ನ 12.30ಕ್ಕೆ ರಾಜಬೀದಿ ಪ್ರವೇಶಿಸಿತು. ದೇವಸ್ಥಾನ ಭಕ್ತ ಮಂಡಳಿ, ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ ಸದಸ್ಯರು ಹಾಗೂ ಭಕ್ತರು ಉತ್ಸಾಹದಿಂದ ರಥವನ್ನು ಎಳೆದರು. ಪ್ರತಿ 100 ಅಡಿ ದೂರಕ್ಕೆ ರಥ ನಿಲ್ಲಿಸಿ ಭಕ್ತರಿಂದ ಪೂಜೆ ಹರಕೆ ಹವನ, ಈಡುಗಾಯಿ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.