‘ಪ್ರತಿಪಕ್ಷದ ನಾಯಕ ಇಲ್ಲದೇ ಇರುವುದಕ್ಕೂ ಅಧಿವೇಶನಕ್ಕೂ ಸಂಬಂಧವಿಲ್ಲ. ಸಂವಿಧಾನದಲ್ಲೂ ವಿರೋಧ ಪಕ್ಷದ ನಾಯಕನಿಲ್ಲದೆ ಕಲಾಪಗಳು ನಡೆಯಬಾರದು ಎಂದು ಉಲ್ಲೇಖಿಸಿಲ್ಲ, ಎರಡು ತಿಂಗಳಾದರೂ ಆ ಹುದ್ದೆಗೆ ಆಯ್ಕೆ ಮಾಡದೇ ಇರುವುದನ್ನು ನೋಡಿದರೆ, ಆ ನಿರ್ಧಾರಕ್ಕೆ ಬರಲು ಧೈರ್ಯ ಅವರಿಗೆ ಇಲ್ಲ ಎಂದು ಕಾಣುತ್ತದೆ. ಆದರೆ, ಕಲಾಪಗಳು ವಿರೋಧ ಪಕ್ಷದ ನಾಯಕನಿಲ್ಲದೆ ಮುಂದುವರಿಯಬಹುದು’ ಎಂದು ತಿಳಿಸಿದರು.