<p><strong>ಅರಸೀಕೆರೆ</strong>: ನಗರದ ಹಾಸನ ರಸ್ತೆಯ ಎಡಭಾಗದ ಹಾಗೂ ಬಲಭಾಗದ ನಾಗರಿಕರು ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.</p>.<p>ಬಲಭಾಗದ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಅಮ್ಮನವರಿಗೆ ಮುಂಜಾನೆ ಅಭಿಷೇಕ, ಸಹಸ್ರ ಕುಂಕುಮಾರ್ಚನೆ ಸೇರಿದಂತೆ ಪುಷ್ಪಲಂಕಾರ ಮಾಡಲಾಯಿತು. ಇಲ್ಲಿನ ನಾಗರಿಕರು ಸಂಪ್ರದಾಯಿಕವಾಗಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಮನೆಗಳಲ್ಲಿ ತಮ್ಮ ಇಷ್ಠಾರ್ಥ ದೇವರ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.</p>.<p>ಹೆಚ್ಚಿನ ಭಕ್ತರು ಕುಟುಂಬಸ್ಥರೊಂದಿಗೆ ದೇವಿಗೆ ದೇವಾಲಯದ ಆವರಣದಲ್ಲಿಯೇ ಓಲೆ ಜೋಡಿಸಿ ಸುತ್ತ ಕಬ್ಬುಗಳನ್ನು ಇಟ್ಟು ಸಿಹಿ ಪೊಂಗಲ್ ತಯಾರಿಸಿದ್ದು ವಿಶೇಷವಾಗಿತ್ತು. ಜತೆಗೆ ಕಬ್ಬು, ಎಳ್ಳು ಬೆಲ್ಲವನ್ನು ನೈವೈದ್ಯ ಮಾಡಿದರು.</p>.<p>ಅರ್ಚಕ ಸುನೀಲ್ ನೇತೃತ್ವದಲ್ಲಿ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಹಾಸನ ರಸ್ತೆಯ ಬಡಾವಣೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಬಂಟಿಂಗ್ಸ್ ರಾರಾಜಿಸಿದವು. </p>.<p>ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ಮುಖ್ಯಸ್ಥರಾದ ಎಂ.ವೇಲುರಾಜ್, ಸತ್ಯಮೂರ್ತಿ, ಶ್ರೀಧರ್, ಬಿಜೆಪಿ ಮುಖಂಡ ಶಿವನ್ರಾಜ್, ವಿನೋದ್, ಪ್ರಶಾಂತ್, ವಿನಾಯಕ, ಮನು, ಗೌತಮ್, ಶೇಷನ್, ಕಿಶೋರ್ ಜೊಲ್ಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ನಗರದ ಹಾಸನ ರಸ್ತೆಯ ಎಡಭಾಗದ ಹಾಗೂ ಬಲಭಾಗದ ನಾಗರಿಕರು ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.</p>.<p>ಬಲಭಾಗದ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಅಮ್ಮನವರಿಗೆ ಮುಂಜಾನೆ ಅಭಿಷೇಕ, ಸಹಸ್ರ ಕುಂಕುಮಾರ್ಚನೆ ಸೇರಿದಂತೆ ಪುಷ್ಪಲಂಕಾರ ಮಾಡಲಾಯಿತು. ಇಲ್ಲಿನ ನಾಗರಿಕರು ಸಂಪ್ರದಾಯಿಕವಾಗಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಮನೆಗಳಲ್ಲಿ ತಮ್ಮ ಇಷ್ಠಾರ್ಥ ದೇವರ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.</p>.<p>ಹೆಚ್ಚಿನ ಭಕ್ತರು ಕುಟುಂಬಸ್ಥರೊಂದಿಗೆ ದೇವಿಗೆ ದೇವಾಲಯದ ಆವರಣದಲ್ಲಿಯೇ ಓಲೆ ಜೋಡಿಸಿ ಸುತ್ತ ಕಬ್ಬುಗಳನ್ನು ಇಟ್ಟು ಸಿಹಿ ಪೊಂಗಲ್ ತಯಾರಿಸಿದ್ದು ವಿಶೇಷವಾಗಿತ್ತು. ಜತೆಗೆ ಕಬ್ಬು, ಎಳ್ಳು ಬೆಲ್ಲವನ್ನು ನೈವೈದ್ಯ ಮಾಡಿದರು.</p>.<p>ಅರ್ಚಕ ಸುನೀಲ್ ನೇತೃತ್ವದಲ್ಲಿ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಹಾಸನ ರಸ್ತೆಯ ಬಡಾವಣೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಬಂಟಿಂಗ್ಸ್ ರಾರಾಜಿಸಿದವು. </p>.<p>ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ಮುಖ್ಯಸ್ಥರಾದ ಎಂ.ವೇಲುರಾಜ್, ಸತ್ಯಮೂರ್ತಿ, ಶ್ರೀಧರ್, ಬಿಜೆಪಿ ಮುಖಂಡ ಶಿವನ್ರಾಜ್, ವಿನೋದ್, ಪ್ರಶಾಂತ್, ವಿನಾಯಕ, ಮನು, ಗೌತಮ್, ಶೇಷನ್, ಕಿಶೋರ್ ಜೊಲ್ಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>