<p><strong>ಅರಕಲಗೂಡು: ತಾಲ್ಲೂಕಿನ ಮರವಳಲು ಗ್ರಾಮದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಫರ್ಧೆಯಲ್ಲಿ ಅಲ್ಲಾ ಪಟ್ಟಣ ಗ್ರಾಮದ ಚಂದ್ರು ಅವರ ಎತ್ತಿನ ಜೋಡಿ ಪ್ರಥಮ ಬಹುಮಾನ ₹50 ಸಾವಿರ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.</strong></p>.<p><strong> ದ್ವಿತೀಯ ಬಹುಮಾನ ₹30 ಸಾವಿರವನ್ನು ಕಾರ್ಗಲ್ ಗ್ರಾಮದ ಮಂಜುನಾಥ್, ತೃತೀಯ ಬಹುಮಾನ ₹20 ಸಾವಿರ, ಟ್ರೋಫಿಯನ್ನು ಮರವಳಲು ಗ್ರಾಮದ ಮೋಹನ್ ಪಡೆದುಕೊಂಡರು.</strong></p>.<p><strong> ನಾಲ್ಕನೆ ಬಹುಮಾನ ₹10 ಸಾವಿರ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಸ್ಫರ್ಧಿ ಹಾಗೂ 5ನೇ ಬಹುಮಾನ ₹5 ಸಾವಿರ ಮತ್ತು ಟ್ರೋಫಿಯನ್ನು ಕೆರೆಕೋಡಿ ಗ್ರಾಮದ ರಘು ಪಡೆದುಕೊಂಡರು.</strong></p>.<p><strong>ಶುಕ್ರವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಬಹುಮಾನ ವಿತರಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಜೆಡಿಎಸ್ ಮುಖಂಡ ಗಾಂಧಿನಗರ ದಿವಾಕರಗೌಡ, ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಉದ್ಯಮಿಗಳಾದ ಹನುಮೇಗೌಡ, ಹರೀಶ್ ಕುಮಾರ್ ಉಪಸ್ಥಿತರಿದ್ದರು.</strong></p>.<p><strong> ರಾಜ್ಯದ ವಿವಿಧ ಜಿಲ್ಲೆಗಳ 40 ಜೊತೆ ಎತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು: ತಾಲ್ಲೂಕಿನ ಮರವಳಲು ಗ್ರಾಮದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಫರ್ಧೆಯಲ್ಲಿ ಅಲ್ಲಾ ಪಟ್ಟಣ ಗ್ರಾಮದ ಚಂದ್ರು ಅವರ ಎತ್ತಿನ ಜೋಡಿ ಪ್ರಥಮ ಬಹುಮಾನ ₹50 ಸಾವಿರ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.</strong></p>.<p><strong> ದ್ವಿತೀಯ ಬಹುಮಾನ ₹30 ಸಾವಿರವನ್ನು ಕಾರ್ಗಲ್ ಗ್ರಾಮದ ಮಂಜುನಾಥ್, ತೃತೀಯ ಬಹುಮಾನ ₹20 ಸಾವಿರ, ಟ್ರೋಫಿಯನ್ನು ಮರವಳಲು ಗ್ರಾಮದ ಮೋಹನ್ ಪಡೆದುಕೊಂಡರು.</strong></p>.<p><strong> ನಾಲ್ಕನೆ ಬಹುಮಾನ ₹10 ಸಾವಿರ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಸ್ಫರ್ಧಿ ಹಾಗೂ 5ನೇ ಬಹುಮಾನ ₹5 ಸಾವಿರ ಮತ್ತು ಟ್ರೋಫಿಯನ್ನು ಕೆರೆಕೋಡಿ ಗ್ರಾಮದ ರಘು ಪಡೆದುಕೊಂಡರು.</strong></p>.<p><strong>ಶುಕ್ರವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಬಹುಮಾನ ವಿತರಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಜೆಡಿಎಸ್ ಮುಖಂಡ ಗಾಂಧಿನಗರ ದಿವಾಕರಗೌಡ, ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಉದ್ಯಮಿಗಳಾದ ಹನುಮೇಗೌಡ, ಹರೀಶ್ ಕುಮಾರ್ ಉಪಸ್ಥಿತರಿದ್ದರು.</strong></p>.<p><strong> ರಾಜ್ಯದ ವಿವಿಧ ಜಿಲ್ಲೆಗಳ 40 ಜೊತೆ ಎತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>