ಶಿಕ್ಷಣ ಇಲಾಖೆ ಎರಡು ಕೊಠಡಿಗಳನ್ನು ಕೊಡುಗೆಯಾಗಿ ನೀಡಿತು. ಮೊದಲ ವರ್ಷ 43 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು, ಇಬ್ಬರು ಶಿಕ್ಷಕಿಯರನ್ನು ನೇಮಿಸಿ ಅವರಿಗೆ ಮೈಸೂರಿನ ಅರಿವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಯಲ್ಲಿ ಎರಡು ದಿನದ ಕ್ರಿಯಾಶೀಲ ತರಬೇತಿ ಕೊಡಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇವರ ವೇತನವನ್ನು ಭರಿಸುತ್ತಿದ್ದಾರೆ. ಮಕ್ಕಳಿಗೆ ಸುತ್ತಮುತ್ತಲ ಪರಿಸರದಲ್ಲಿ ದೊರೆಯುವ ವಸ್ತುಗಳ ಮೂಲಕ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ ಪರಿಚಯಿಸುತ್ತಿದ್ದು, ಇದು ಮಕ್ಕಳ ಕಲಿಕೆಯ ಮೇಲೆ ವಿಶೇಷ ಪರಿಣಾಮ ಬೀರಲಿದೆ.