‘ನನಗೆ ಕೋವಿಡ್ ಬಂತು. ಸುಸ್ತು, ಉಸಿರಾಟದ ಸಮಸ್ಯೆ ಆಗಿತ್ತು. ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾದೆ. ಆದರೆ, ಅಲ್ಲಿ ಫಿಜಿಷಿಯನ್ ಇಲ್ಲದ ಕಾರಣ ಹಾಸನದ ಹಿಮ್ಸ್ಗೆ ಕಳುಹಿಸಿದರು. ಅಲ್ಲಿ ಹಾಸಿಗೆ ಇಲ್ಲದೆ ಸಮಸ್ಯೆ ಆಯ್ತು. ಡಾ. ಎಂ.ಆರ್. ಮಧುಸೂದನ್ ಅವರು ಹಾಸನದಿಂದ ಪುನಃ ಕ್ರಾಫರ್ಡ್ ಆಸ್ಪತ್ರೆಗೆ ಕರೆಸಿಕೊಂಡು ಆಮ್ಲಜನಕದ ವ್ಯವಸ್ಥೆ ಇರುವ ಹಾಸಿಗೆ ಒದಗಿಸಿಕೊಟ್ಟರು. ಈಗ ಗುಣಮುಖನಾಗಿ ಮನೆಗೆ ಬಂದಿದ್ದೇನೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ ಕೌಡಹಳ್ಳಿ ತಮ್ಮ ಅನುಭವ ಹಂಚಿಕೊಂಡರು.