ಹೆತ್ತೂರು ಮತ್ತು ಯಸಳೂರು ಹೋಬಳಿಯ ಗ್ರಾಮಗಳಲ್ಲಿ 10 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಈತ, ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆ ನೀಡಿ ಬೆಳೆಗಾರರರಿಂದ ಕಾಫಿ, ಕಾಳುಮೆಣಸನ್ನು ಖರೀದಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಫಸಲು ಪಡೆದ ವ್ಯಾಪಾರಿ, ಬೆಳೆಗಾರರಿಗೆ ತಿಂಗಳ ಬಡ್ಡಿ ನೀಡುವುದಾಗಿ ಮಾರಾಟದ ಹಣವನ್ನು ತಾನೇ ಇಟ್ಟುಕೊಂಡಿದ್ದ. ಕೆಲವು ತಿಂಗಳ ಬಡ್ಡಿಯನ್ನು ಮಾತ್ರ ನೀಡಿದ್ದ ಎಂದು ತಿಳಿದುಬಂದಿದೆ.