ಹೊಸದಾಗಿ ಅರಕಲಗೂಡು ತಾಲ್ಲೂಕಿನ 21, ಅರಸೀಕೆರೆ 9, ಬೇಲೂರು 4, ಚನ್ನರಾಯಪಟ್ಟಣ 10, ಹಾಸನ 82, ಹೊಳೆನರಸೀಪುರ 7 ಹಾಗೂ ಸಕಲೇಶಪುರ ತಾಲ್ಲೂಕಿನ ಮೂವರಿಗೆ ಸೋಂಕು ತಗುಲಿದೆ. 88 ಜನ ಸೇರಿ ಈವರೆಗೆ 1190 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1607 ಸಕ್ರಿಯ ಪ್ರಕರಣಗಳಿದ್ದು, 39 ರೋಗಿಗಳನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.