<p><strong>ಕೊಣನೂರು</strong>: ಪಟ್ಟಣದ ಬ್ರಾಹ್ಮಣ ಮಹಾಸಂಘದ ಶ್ರೀರಾಮಮಂದಿರದ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಕೊಣನೂರು ಅಭಿವೃದ್ಧಿಯ ಹರಿಕಾರ ದಿವಂಗತ ವೆಂಕಟರಾಮಯ್ಯ ಅವರ ಪುತ್ಥಳಿಯನ್ನು ಶಾಸಕ ಎ.ಮಂಜು, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮತ್ತು ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅನಾವರಣಗೊಳಿಸಿದರು.</p>.<p>ಶಾಸಕ ಎ. ಮಂಜು ಮಾತನಾಡಿ, ಕೊಣನೂರು ಕಸಬಾ ಶಾನುಬೋಗರಾದ ವೆಂಕಟರಾಮಯ್ಯ ಅವರು, ಗ್ರಾಮ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು ಹಾಗೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ ಶ್ರಮಿಸಿದ್ದಾರೆ. ಡೀವಿಯೇಶನ್ ರಸ್ತೆ, ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಕಾರಣೀಭೂತರಾದರು. ಆಸ್ಪತ್ರೆಗಳು, ರಸ್ತೆ, ಚರಂಡಿ ಮುಂತಾದ ಮೂಲಸೌಕರ್ಯಗಳ ಜತೆಗೆ ಕೊಣನೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಿಂದೆ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಆಗಿದ್ದ ವೆಂಕಟರಾಮಯ್ಯ ಅವರ ಪ್ರತಿಮೆಯನ್ನು ಬಹಳ ವರ್ಷಗಳ ಹಿಂದೆಯೇ ಸ್ಥಾಪಿಸಬೇಕಿತ್ತು. ತಡವಾಗಿದೆಯಾದರೂ ಅವರ ಪ್ರತಿಮೆ ಇಂದು ಅನಾವರಣಗೊಂಡಿರುವುದು ಸಂತಸ ತಂದಿದೆ. ಅವರು ನೀಡಿದ್ದ ಕೊಡುಗೆಗಳನ್ನು ಇಂದಿಗೂ ಇಲ್ಲಿ ಕಾಣಬಹುದು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತೇನೆ ಎಂದರು.</p>.<p>ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮಾತನಾಡಿ, ತಮ್ಮ ದೂರದೃಷ್ಟಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸಿದ ವೆಂಕಟರಾಮಯ್ಯ ಅವರ ಪ್ರತಿಮೆಯನ್ನು ಪ್ರತಿಸ್ಥಾಪಿಸಿರುವುದು ಎಲ್ಲರಿಗೂ ಸ್ಫೂರ್ತಿದಾಯಕ . ಸ್ಥಳೀಯ ಆಡಳಿತ, ಸರ್ಕಾರ ಗಮನಹರಿಸಿ ಅವರು ಮಾಡಿರುವಂತಹ ಕೆಲಸಗಳನ್ನು ಉನ್ನತೀಕರಣ ಮಾಡಿ ಅವರ ಹೆಸರನ್ನು ಎಲ್ಲರೂ ಸ್ಮರಿಸುವಂತೆ ಮಾಡಬೇಕು. ವೆಂಕಟರಾಮಯ್ಯ ಅವರ ಹೆಸರು ಸದಾ ಸ್ಮರಣೀಯವಾಗುವಂತೆ ಅವರ ಹೆಸರನ್ನು ನಮ್ಮೂರಿನ ಮುಖ್ಯ ರಸ್ತೆಗೊ, ಗ್ರಂಥಾಲಯಕ್ಕೊ ಅಥವಾ ಉದ್ಯಾನಕ್ಕೊ ಇಡಬೇಕೆಂದು ಸಲಹೆ ನೀಡಿದರು.</p>.<p>ರಾಜ್ಯ ಸರ್ಕಾರ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ‘ನಮ್ಮ ಪೂರ್ವಜರು ಋಷಿ ಸದೃಶ್ಯವಾಗಿ ಜೀವನ ಕಳೆದಿದ್ದಾರೆ ಎಂಬುದನ್ನು ನಾವು ನೆನಪಿಗೆ ತಂದುಕೊಳ್ಳಬೇಕು. ನಾವು ಸ್ವಾರ್ಥ ಬಿಟ್ಟು ಮಾಡುವ ಧರ್ಮಕಾರ್ಯಗಳೇ ನಮ್ಮ ಜೊತೆಗೆ ಬರುತ್ತವೆ. ನಮ್ಮ ಪೂರ್ವಜರು ಮಾಡಿದ ಸತ್ಕಾರ್ಯ ಹಾಗೂ ಸಮಾಜ ಸೇವೆಯಿಂದ ನಾವು ಇಂದು ಉತ್ತಮ ಸ್ಥಿತಿಯಲ್ಲಿದ್ದು ಅನೇಕ ಅವಕಾಶಗಳು ಸಿಕ್ಕಿವೆ ಎಂಬುದನ್ನು ಮರೆಯಬಾರದು’ ಎಂದರು.</p>.<p>ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಬಬ್ಬೂರು ಕಮ್ಮೆ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಸತ್ಯಪ್ರಕಾಶ್ ಮಾತನಾಡಿ ‘ನಾನೂ ವೆಂಕಟರಾಮಯ್ಯ ಅವರ ಮನೆಯಲ್ಲಿ ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದವನು. ನಾನಿಂದು ಈ ಮಟ್ಟದಲ್ಲಿ ಇದ್ದೇನೆಂದರೆ ವೆಂಕಟರಾಮಯ್ಯ ಅವರೇ ಕಾರಣ ಎಂದು ಸ್ಮರಿಸುತ್ತಾ ವೆಂಕಟರಾಮಯ್ಯನವರ ಜೀವನ ಚರಿತ್ರೆಯ ಬಗ್ಗೆ ಒಂದು ಪುಸ್ತಕ ಹೊರತರಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಕುಟುಂಬದವರೆಲ್ಲರೂ ಸಹಕಾರ ನೀಡಿದರೆ ಅವರ ಬಗೆಗಿನ ಪುಸ್ತಕ ಹೊರತಂದು ಕೊಣನೂರಿನ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದರು.</p>.<p>ವೆಂಕಟರಾಮಯ್ಯ ಅವರ ಮೊಮ್ಮಗ, ನಿವೃತ್ತ ಐಎಎಸ್ ಅಧಿಕಾರಿ ಎ.ರಾಮಸ್ವಾಮಿ ಮಾತನಾಡಿ, ‘ನಮ್ಮ ತಾತನ ಕಾಲದಲ್ಲಿ ಕೊಣನೂರಿನಲ್ಲಿ ಕೆಲವೇ ಮನೆಗಳಿದ್ದವು. ಅಂತಹ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ, ಕಾಲೇಜು, ಪಶು ಆಸ್ಪತ್ರೆ, ಬಸ್ ನಿಲ್ದಾಣ, ಪುರಸಭೆ, ವಾರದ ಸಂತೆ, ಪೊಲೀಸ್ ಠಾಣೆ, ಕಾವೇರಿ ನದಿಗೆ ಮೆಟ್ಟಿಲುಗಳು, ಶುದ್ಧಕುಡಿಯುವ ನೀರಿನ ಘಟಕ ಮುಂತಾದ ಅನೇಕ ಕಾರ್ಯಗಳನ್ನು ಮಾಡಿದ್ದರು. 1956 ರಲ್ಲಿ ಕೊಣನೂರಿಗೆ ವಿದ್ಯುತ್ ಸಂಪರ್ಕ ಹಾಗೂ ಪ್ರತೀ ಮನೆಗೂ ಕುಡಿಯುವ ನೀರಿನ ಸಂಪರ್ಕ ತಂದ ಕೀರ್ತಿ ನಮ್ಮ ತಾತನವರಿಗೆ ಸಲ್ಲುತ್ತದೆ’ ಎಂದರು.</p>.<p>ಕೊಣನೂರು ವೆಂಕಟರಾಮಯ್ಯ ಸೇವಾ ಸಮಿತಿ ಪದಾಧಿಕಾರಿಗಳು, ಕೊಣನೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.</p>
<p><strong>ಕೊಣನೂರು</strong>: ಪಟ್ಟಣದ ಬ್ರಾಹ್ಮಣ ಮಹಾಸಂಘದ ಶ್ರೀರಾಮಮಂದಿರದ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಕೊಣನೂರು ಅಭಿವೃದ್ಧಿಯ ಹರಿಕಾರ ದಿವಂಗತ ವೆಂಕಟರಾಮಯ್ಯ ಅವರ ಪುತ್ಥಳಿಯನ್ನು ಶಾಸಕ ಎ.ಮಂಜು, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮತ್ತು ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅನಾವರಣಗೊಳಿಸಿದರು.</p>.<p>ಶಾಸಕ ಎ. ಮಂಜು ಮಾತನಾಡಿ, ಕೊಣನೂರು ಕಸಬಾ ಶಾನುಬೋಗರಾದ ವೆಂಕಟರಾಮಯ್ಯ ಅವರು, ಗ್ರಾಮ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು ಹಾಗೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ ಶ್ರಮಿಸಿದ್ದಾರೆ. ಡೀವಿಯೇಶನ್ ರಸ್ತೆ, ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಕಾರಣೀಭೂತರಾದರು. ಆಸ್ಪತ್ರೆಗಳು, ರಸ್ತೆ, ಚರಂಡಿ ಮುಂತಾದ ಮೂಲಸೌಕರ್ಯಗಳ ಜತೆಗೆ ಕೊಣನೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಿಂದೆ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಆಗಿದ್ದ ವೆಂಕಟರಾಮಯ್ಯ ಅವರ ಪ್ರತಿಮೆಯನ್ನು ಬಹಳ ವರ್ಷಗಳ ಹಿಂದೆಯೇ ಸ್ಥಾಪಿಸಬೇಕಿತ್ತು. ತಡವಾಗಿದೆಯಾದರೂ ಅವರ ಪ್ರತಿಮೆ ಇಂದು ಅನಾವರಣಗೊಂಡಿರುವುದು ಸಂತಸ ತಂದಿದೆ. ಅವರು ನೀಡಿದ್ದ ಕೊಡುಗೆಗಳನ್ನು ಇಂದಿಗೂ ಇಲ್ಲಿ ಕಾಣಬಹುದು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತೇನೆ ಎಂದರು.</p>.<p>ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮಾತನಾಡಿ, ತಮ್ಮ ದೂರದೃಷ್ಟಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸಿದ ವೆಂಕಟರಾಮಯ್ಯ ಅವರ ಪ್ರತಿಮೆಯನ್ನು ಪ್ರತಿಸ್ಥಾಪಿಸಿರುವುದು ಎಲ್ಲರಿಗೂ ಸ್ಫೂರ್ತಿದಾಯಕ . ಸ್ಥಳೀಯ ಆಡಳಿತ, ಸರ್ಕಾರ ಗಮನಹರಿಸಿ ಅವರು ಮಾಡಿರುವಂತಹ ಕೆಲಸಗಳನ್ನು ಉನ್ನತೀಕರಣ ಮಾಡಿ ಅವರ ಹೆಸರನ್ನು ಎಲ್ಲರೂ ಸ್ಮರಿಸುವಂತೆ ಮಾಡಬೇಕು. ವೆಂಕಟರಾಮಯ್ಯ ಅವರ ಹೆಸರು ಸದಾ ಸ್ಮರಣೀಯವಾಗುವಂತೆ ಅವರ ಹೆಸರನ್ನು ನಮ್ಮೂರಿನ ಮುಖ್ಯ ರಸ್ತೆಗೊ, ಗ್ರಂಥಾಲಯಕ್ಕೊ ಅಥವಾ ಉದ್ಯಾನಕ್ಕೊ ಇಡಬೇಕೆಂದು ಸಲಹೆ ನೀಡಿದರು.</p>.<p>ರಾಜ್ಯ ಸರ್ಕಾರ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ‘ನಮ್ಮ ಪೂರ್ವಜರು ಋಷಿ ಸದೃಶ್ಯವಾಗಿ ಜೀವನ ಕಳೆದಿದ್ದಾರೆ ಎಂಬುದನ್ನು ನಾವು ನೆನಪಿಗೆ ತಂದುಕೊಳ್ಳಬೇಕು. ನಾವು ಸ್ವಾರ್ಥ ಬಿಟ್ಟು ಮಾಡುವ ಧರ್ಮಕಾರ್ಯಗಳೇ ನಮ್ಮ ಜೊತೆಗೆ ಬರುತ್ತವೆ. ನಮ್ಮ ಪೂರ್ವಜರು ಮಾಡಿದ ಸತ್ಕಾರ್ಯ ಹಾಗೂ ಸಮಾಜ ಸೇವೆಯಿಂದ ನಾವು ಇಂದು ಉತ್ತಮ ಸ್ಥಿತಿಯಲ್ಲಿದ್ದು ಅನೇಕ ಅವಕಾಶಗಳು ಸಿಕ್ಕಿವೆ ಎಂಬುದನ್ನು ಮರೆಯಬಾರದು’ ಎಂದರು.</p>.<p>ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಬಬ್ಬೂರು ಕಮ್ಮೆ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಸತ್ಯಪ್ರಕಾಶ್ ಮಾತನಾಡಿ ‘ನಾನೂ ವೆಂಕಟರಾಮಯ್ಯ ಅವರ ಮನೆಯಲ್ಲಿ ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದವನು. ನಾನಿಂದು ಈ ಮಟ್ಟದಲ್ಲಿ ಇದ್ದೇನೆಂದರೆ ವೆಂಕಟರಾಮಯ್ಯ ಅವರೇ ಕಾರಣ ಎಂದು ಸ್ಮರಿಸುತ್ತಾ ವೆಂಕಟರಾಮಯ್ಯನವರ ಜೀವನ ಚರಿತ್ರೆಯ ಬಗ್ಗೆ ಒಂದು ಪುಸ್ತಕ ಹೊರತರಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಕುಟುಂಬದವರೆಲ್ಲರೂ ಸಹಕಾರ ನೀಡಿದರೆ ಅವರ ಬಗೆಗಿನ ಪುಸ್ತಕ ಹೊರತಂದು ಕೊಣನೂರಿನ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದರು.</p>.<p>ವೆಂಕಟರಾಮಯ್ಯ ಅವರ ಮೊಮ್ಮಗ, ನಿವೃತ್ತ ಐಎಎಸ್ ಅಧಿಕಾರಿ ಎ.ರಾಮಸ್ವಾಮಿ ಮಾತನಾಡಿ, ‘ನಮ್ಮ ತಾತನ ಕಾಲದಲ್ಲಿ ಕೊಣನೂರಿನಲ್ಲಿ ಕೆಲವೇ ಮನೆಗಳಿದ್ದವು. ಅಂತಹ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ, ಕಾಲೇಜು, ಪಶು ಆಸ್ಪತ್ರೆ, ಬಸ್ ನಿಲ್ದಾಣ, ಪುರಸಭೆ, ವಾರದ ಸಂತೆ, ಪೊಲೀಸ್ ಠಾಣೆ, ಕಾವೇರಿ ನದಿಗೆ ಮೆಟ್ಟಿಲುಗಳು, ಶುದ್ಧಕುಡಿಯುವ ನೀರಿನ ಘಟಕ ಮುಂತಾದ ಅನೇಕ ಕಾರ್ಯಗಳನ್ನು ಮಾಡಿದ್ದರು. 1956 ರಲ್ಲಿ ಕೊಣನೂರಿಗೆ ವಿದ್ಯುತ್ ಸಂಪರ್ಕ ಹಾಗೂ ಪ್ರತೀ ಮನೆಗೂ ಕುಡಿಯುವ ನೀರಿನ ಸಂಪರ್ಕ ತಂದ ಕೀರ್ತಿ ನಮ್ಮ ತಾತನವರಿಗೆ ಸಲ್ಲುತ್ತದೆ’ ಎಂದರು.</p>.<p>ಕೊಣನೂರು ವೆಂಕಟರಾಮಯ್ಯ ಸೇವಾ ಸಮಿತಿ ಪದಾಧಿಕಾರಿಗಳು, ಕೊಣನೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.</p>