<p>ಹಾಸನ: ಮಕ್ಕಳಿಗೆ ನೀಡುವ ಆಹಾರವು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಡಾ.ದಿನೇಶ್ ಬಿ.ಕಬ್ಳಿಗೆರೆ ತಿಳಿಸಿದರು.<br /> <br /> ನಗರದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ರೋಟರಿ ಹಾಸನ -ಮಿಡ್ ಟೌನ್ ಸಂಸ್ಥೆ ಹಾಗೂ ಭಾರತೀಯ ಶಿಶು ತಜ್ಞರ ಸಂಘ ಈಚೆಗೆ ಆಯೋಜಿಸಿದ್ದ `ವಿಶ್ವ ಹದಿಹರೆಯರ ದಿನಾಚರಣೆ~ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.<br /> <br /> ಸತ್ವಭರಿತ ಬೇಳೆ ಕಾಳುಗಳು, ಸೋಪ್ಪು, ಹಣ್ಣು, ಹಾಲಿನ ಉತ್ಪನ್ನ ಹಾಗೂ ಮೊಟ್ಟೆಯಂತಹ ಪದಾರ್ಥವನ್ನು ಸೇವಿಸುವಂತೆ ಮಾಹಿತಿ ನೀಡಿದರು.<br /> <br /> ರೋಟರಿ ಹಾಸನ ಮಿಡ್ಟೌನ್ ಸಂಸ್ಥೆಯ ಅಧ್ಯಕ್ಷ ಡಾ.ಬಿ. ಸುಧೀರ್ ಹದಿಹರೆಯದವರ ಬೌದ್ಧಿಕ, ಲೈಂಗಿಕ ಹಾಗೂ ಸಂತಾನಾಭಿವೃದ್ಧಿ ಬೆಳವಣಿಗೆಗಳು ಮತ್ತು ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿದರು.<br /> <br /> ಮಾನಸಿಕ ತಜ್ಞೆ ಡಾ.ಶ್ರೀದೇವಿ ಹದಿಹರೆಯದವರ ಮಾನಸಿಕ ಬೆಳವಣಿಗೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಜ್ಞರ ಬಳಿ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಂಡರು.<br /> <br /> ಸಿ.ಎಂ.ಚಂದ್ರಶೇಖರ್, ವಂದನಾ, ರೋಟರಿ ಮಿಡ್ಟೌನ್ ಕಾರ್ಯರ್ಶಿ ರಘು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಮಕ್ಕಳಿಗೆ ನೀಡುವ ಆಹಾರವು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಡಾ.ದಿನೇಶ್ ಬಿ.ಕಬ್ಳಿಗೆರೆ ತಿಳಿಸಿದರು.<br /> <br /> ನಗರದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ರೋಟರಿ ಹಾಸನ -ಮಿಡ್ ಟೌನ್ ಸಂಸ್ಥೆ ಹಾಗೂ ಭಾರತೀಯ ಶಿಶು ತಜ್ಞರ ಸಂಘ ಈಚೆಗೆ ಆಯೋಜಿಸಿದ್ದ `ವಿಶ್ವ ಹದಿಹರೆಯರ ದಿನಾಚರಣೆ~ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.<br /> <br /> ಸತ್ವಭರಿತ ಬೇಳೆ ಕಾಳುಗಳು, ಸೋಪ್ಪು, ಹಣ್ಣು, ಹಾಲಿನ ಉತ್ಪನ್ನ ಹಾಗೂ ಮೊಟ್ಟೆಯಂತಹ ಪದಾರ್ಥವನ್ನು ಸೇವಿಸುವಂತೆ ಮಾಹಿತಿ ನೀಡಿದರು.<br /> <br /> ರೋಟರಿ ಹಾಸನ ಮಿಡ್ಟೌನ್ ಸಂಸ್ಥೆಯ ಅಧ್ಯಕ್ಷ ಡಾ.ಬಿ. ಸುಧೀರ್ ಹದಿಹರೆಯದವರ ಬೌದ್ಧಿಕ, ಲೈಂಗಿಕ ಹಾಗೂ ಸಂತಾನಾಭಿವೃದ್ಧಿ ಬೆಳವಣಿಗೆಗಳು ಮತ್ತು ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿದರು.<br /> <br /> ಮಾನಸಿಕ ತಜ್ಞೆ ಡಾ.ಶ್ರೀದೇವಿ ಹದಿಹರೆಯದವರ ಮಾನಸಿಕ ಬೆಳವಣಿಗೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಜ್ಞರ ಬಳಿ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಂಡರು.<br /> <br /> ಸಿ.ಎಂ.ಚಂದ್ರಶೇಖರ್, ವಂದನಾ, ರೋಟರಿ ಮಿಡ್ಟೌನ್ ಕಾರ್ಯರ್ಶಿ ರಘು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>