ಹೆತ್ತೂರು: ಕಾಡಾನೆಗಳು ಭಾನುವಾರ ದಾಳಿ ಮಾಡಿದ್ದರಿಂದ ಬನ್ನಹಳ್ಳಿ, ವಳಲಹಳ್ಳಿ ಕೂಡಿಗೆ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಭತ್ತ ಹಾಗೂ ಕಾಫಿ ಹಾನಿಯಾಗಿದೆ.
ಸುಮಾರು 15 ಆನೆಗಳ ಹಿಂಡಿನ ದಾಳಿ ಮಾಡಿ ಹೆತ್ತೂರು ಗ್ರಾಮದ ಗಣೇಶ್ ಅವರಿಗೆ ಸೇರಿದ ಸುಮಾರು 2 ಪ್ರದೇಶದಲ್ಲಿ ಕಾಫಿ ಏಲಕ್ಕಿ, ಅಡಿಕೆ, ಬಾಳೆ, ಶುಂಠಿ ಬೆಳೆಯನ್ನು ನಾಶಪಡಿಸಿದ್ದು ಅಪಾರ ನಷ್ಟ ಸಂಭವಿಸಿದೆ.