ಶ್ರವಣಬೆಳಗೊಳ: ಈಚೆಗೆ ನಡೆದ ದಶಲಕ್ಷಣ ಮಹಾಪರ್ವದಲ್ಲಿ ದೇಶದ ವಿವಿಧೆಡೆಯಿಂದ ತ್ಯಾಗಿಗಳು ಸಾವಿರಾರು ಕಿ.ಮೀ. ನಡೆದು ಬಂದಿದ್ದರು. ಪ್ರತಿನಿತ್ಯ 24 ತೀರ್ಥಂಕರರಿಗೆ ಎಕಕಾಲದಲ್ಲಿ ಜಲ, ಎಳನೀರು, ಈಕ್ಷುರಸ, ಕ್ಷೀರ, ಅರಿಸಿನ, ಮಲಯಾದ್ರಿ ಚಂದನ, ಚಂದನ, ಪುಷ್ಪವೃಷ್ಟಿ, ಕನಕವೃಷ್ಟಿ, ಅರ್ಘ್ಯ, ಶಾಂತಿಧಾರಾ ಮತ್ತು ಮಹಾಮಂಗಳಾರತಿ, ಛತ್ರಿ, ಚಾಮರಸೇವೆಯೊಂದಿಗೆ ಕಲ್ಪಧ್ರುಮ ಮಹಾಪೂಜೆಯು ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೆರವೇರಿತು.